ರಾಯಚೂರು- ಮಂತ್ರಾಲಯ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಸರ್ಕಾರ ಪ್ರಸ್ತಾವನೆ
ರಾಯಚೂರು-ಮಂತ್ರಾಲಯಂ ರಸ್ತೆಯನ್ನು ರೂ.441.81 ಕೋಟಿ ವೆಚ್ಚದಲ್ಲಿ ಚತುಷ್ಪಧ ರಸ್ತೆಯಾಗಿ ನಿರ್ಮಿಸಲು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ಬೆಳಗಾವಿ, ನವೆಂಬರ್, 22: ರಾಯಚೂರಿನಿಂದ ಮಂತ್ರಾಲಯಕ್ಕೆ 441.81 ಕೋಟಿ ವೆಚ್ಚದಲ್ಲಿ ಚತುಷ್ಪಥ ರಸ್ತೆ ನಿರ್ಮಿಸಲು, ಕೇಂದ್ರ ಭೂ ಸಾರಿಗೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಎಂದು ಲೋಕೋಪಯೋಗಿ ಸಚಿವ ಎಚ್.ಸಿ ಮಹದೇವಪ್ಪ ಅವರು ಅಧಿವೇಶನದಲ್ಲಿ ತಿಳಿಸಿದರು.
ಇದೇ ಹೆದ್ದಾರಿ ಮಾರ್ಗದಲ್ಲಿರುವ ಕೃಷ್ಣಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸಲು 160 ಕೋಟಿ ರೂ. ವೆಚ್ಚದ ಯೋಜನೆಯ ಪ್ರಸ್ತಾವನೆಯನ್ನೂ ಸಹ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದರು. [ಅಕ್ರಮ ವಲಸಿಗರ ಪತ್ತೆಗೆ ವಿಶೇಷ ಕಾರ್ಯಪಡೆ: ಪರಮೇಶ್ವರ್]
ರಸ್ತೆ ಸ್ಥಿತಿಗತಿ ತಿಳಿಯಲು ಸಾಪ್ಟ್ ವೇರ್
ರಾಜ್ಯದ
ರಸ್ತೆ
ಸ್ಥಿತಿಗತಿಗಳ
ಮಾಹಿತಿ
ಟೆಂಡರ್
ಪ್ರಕ್ರಿಯೆ
ಯೋಜನೆ
ಕುರಿತಂತೆ
ಮಾಹಿತಿ
ಸಂಗ್ರಹಿಸಲು
ಹಾಗೂ
ತಿಳಿಸಲು
ಲೋಕೋಪಯೋಗಿ
ಇಲಾಖೆ
ಹೊಸ
ತಂತ್ರಾಂಶವೊಂದನ್ನು
ಅಭಿವೃದ್ಧಿಪಡಿಸಿದೆ
ಎಂದು
ಅವರು
ವಿಧಾನ
ಪರಿಷತ್ತಿಗೆ
ತಿಳಿಸಿದರು.[ಆಡಳಿತ
ಪಕ್ಷದಿಂದಲೇ
ವಿಧಾನಸಭೆಯಲ್ಲಿ
ಧರಣಿ]
ಕಲಬುರಗಿ ವಿಮಾನ ನಿಲ್ದಾಣ ಶೀಘ್ರ ಪೂರ್ಣ
ಮುಂದಿನ ಮಾರ್ಚ್ ವೇಳೆಗೆ ಕಲಬುರಗಿಯಲ್ಲಿ ವಿಮಾನ ನಿಲ್ದಾಣದ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.ಖಾಸಗಿ ಸಂಸ್ಥೆಯಿಂದ ವಿಮಾನ ನಿಲ್ಧಾಣ ಕಾಮಗಾರಿಯನ್ನು ವಾಪಾಸ್ ಪಡೆಯಲಾಗಿದೆ ಇಲಾಖೆ ವತಿಯಿಂದ 109.47ಕೋಟಿ ವೆಚ್ಚದಲ್ಲಿ ಮುಂದಿನ ಮಾರ್ಚ್ 18ರ ಹೊತ್ತಿಗೆ ಪೂರ್ಣಗೊಳಿಸಲಾಗುವುದು ಎಂದು ಸದನಕ್ಕೆ ಅವರು ತಿಳಿಸಿದರು.
ಟೋಲ್ ಗೇಟ್ ಗಳಲ್ಲಿ ಅಂಬ್ಯುಲೆನ್ಸ್-ವಿಐಪಿಗಳಿಗೆ ಪ್ರತ್ಯೇಕ ದ್ವಾರ
ಅಂಬ್ಯುಲೆನ್ಸ್ ಮತ್ತು ವಿಐಪಿ ವಾಹನಗಳಿಗೆ ಟೋಲ್ ಗೇಟ್ ಗಳಲ್ಲಿ ಪ್ರತ್ಯೇಕ ದ್ವಾರ ವ್ಯವಸ್ಥೆ ಮಾಡಲಾಗಿದೆ. ಕೆಲ ಟೋಲ್ ಗೇಟ್ ಗಳಲ್ಲಿ ಸ್ಥಳದ ಅಭಾವದಿಂದ ಪ್ರತ್ಯೇಕ ದ್ವಾರ ಕಲ್ಪಿಸಲು ಸಾಧ್ಯವಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಎಚ್.ಮಹದೇವಪ್ಪ ವಿಧಾನ ಪರಿಷತ್ ನಲ್ಲಿ ಇಂದು ತಿಳಿಸಿದರು.