ಕುಂದಾನಗರಿ ಬೆಳಗಾವಿಯಲ್ಲಿ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತ
ಬೆಳಗಾವಿ,
ಜೂನ್.10:
ಕುಂದಾನಗರಿ
ಬೆಳಗಾವಿಯಲ್ಲಿ
ಇಂದು
ಭಾನುವಾರ
ಬೆಳಗ್ಗೆಯಿಂದಲೂ
ಧಾರಾಕಾರ
ಮಳೆ
ಸುರಿಯುತ್ತಿದೆ.
ವರುಣನ
ಆರ್ಭಟಕ್ಕೆ
ಇಲ್ಲಿನ
ಜನರು
ಮನೆಯಿಂದ
ಹೊರಗೆ
ಬಂದೇ
ಇಲ್ಲ.
ಕಳೆದ ಅರ್ಧ ಗಂಟೆಯಿಂದ ನಿರಂತರವಾಗಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಮುಂಗಾರು: ದಕ್ಷಿಣ ಕೊಂಕಣ, ಗೋವಾದಲ್ಲಿ ಭಾರಿ ಮಳೆ ಸಾಧ್ಯತೆ
ಆದರೆ ಸುರಿಯುತ್ತಿರುವ ಮುಂಗಾರು ಮಳೆಗೆ ರೈತರ ಕೃಷಿ ಚಟುವಟಿಕೆಗಳು ಚುರುಕುಗೊಂಡಿರುವುದಂತು ಸುಳ್ಳಲ್ಲ. ಇದೀಗ ಬರದಿಂದ ತತ್ತರಿಸಿದ ರೈತರ ಮುಖದಲ್ಲಿ ಮುಂಗಾರು ಮಳೆ ಮಂದಹಾಸ ಮೂಡಿಸಿದೆ.
ಮುಂಗಾರು ಮಳೆ ರಾಜ್ಯದಾದ್ಯಂತ ಆರಂಭಗೊಂಡಿದ್ದು, ಹಲವೆಡೆ ಚುರುಕುಗೊಂಡಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಗ್ರಾಮೀಣ ಭಾಗದಲ್ಲಿ ನದಿಗಳು ತುಂಬಿ ಹರಿಯುತ್ತಿದೆ. ಬಿಸಿಲ ನಾಡು ವಿಜಯಪುರದಲ್ಲಿಯೂ ಮಳೆ ಸುರಿಯುತ್ತಲಿದೆ.
ಧಾರಾಕಾರವಾಗಿ ಮಳೆ ಸುರಿಯಲು ಆರಂಭಿಸಿದ್ದು, ರೈತರು ಹರ್ಷಗೊಂಡಿದ್ದಾರೆ. ಕರಾವಳಿ ಜಿಲ್ಲೆಗಳು ಸೇರಿದಂತೆ ಬೆಳಗಾವಿ, ಬಾಗಲಕೋಟೆ, ಬೀದರ್, ಹಾವೇರಿ, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.