ಬೆಳಗಾವಿ : ಭೀಕರ ರಸ್ತೆ ಅಪಘಾತ, 5 ಸಾವು
ಬೆಳಗಾವಿ, ಫೆಬ್ರವರಿ 18 : ಕೆಎಸ್ಆರ್ಟಿಸಿ ಬಸ್ ಮತ್ತು ಕ್ರೂಸರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, 5 ಜನರು ಸಾವನ್ನಪ್ಪಿದ್ದಾರೆ. ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಹಳ್ಳಿ ಗ್ರಾಮದ ಬಳಿ ಶನಿವಾರ ತಡರಾತ್ರಿ ಈ ಅಪಘಾತ ನಡೆದಿದೆ. ಕ್ರೂಸರ್ನಲ್ಲಿದ್ದ 5 ಜನರು ಸಾವನ್ನಪ್ಪಿದ್ದು, 9ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.
ಕಕಮರಿಯಿಂದ ಅವರಖೋಡ ಗ್ರಾಮಕ್ಕೆ ಸಂಬಂಧಿಕರ ಅಂತಿಮೆ ಯಾತ್ರೆಗೆ ತೆರಳುವ ಸಂದರ್ಭದಲ್ಲಿ ಅಪಘಾತ ನಡೆದಿದೆ. ಪೊಲೀಸರು ಸರ್ಕಾರಿ ಬಸ್ ಚಾಲಕನನ್ನು ಬಂಧಿಸಿದ್ದಾರೆ.
ಅಪಘಾತದಲ್ಲಿ ಗಾಯಗೊಂಡವರನ್ನು ಅಥಣಿ ಸರಕಾರಿ ಆಸ್ಪತ್ರೆ, ಮಿರಜ್ ಆಸ್ಪತ್ರೆ ಗೆ ದಾಖಲಿಸಿ ಚಿಕಿತ್ಸೆ ನಿಡಲಾಗುತ್ತಿದೆ. ಐಗಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತಪಟ್ಟವರನ್ನು ಅಣ್ಣಪ್ಪಾ ಜಾಧವ (40), ಅರ್ಚನಾ ಜಾಧವ (36), ರವಿ ಜಾಧವ (12), ರಾಧಾಬಾಯಿ ಜಾಧವ (50) ಮತ್ತು ಗೌತವ್ವಾ ಮಠ (60) ಎಂದು ಗುರುತಿಸಲಾಗಿದೆ.
Comments
English summary
5 killed on the spot and 9 injured when toofan cruiser in which they were travelling collided with a KSRTC bus in Athani, Belagavi, Karnataka on Feb 17, 2018 night.