ಮುಜರಾಯಿ ಇಲಾಖೆ ವ್ಯಾಪ್ತಿಯ ಶಾಲೆಗಳು ಶಿಕ್ಷಣ ಇಲಾಖೆಗೆ
ಬೆಳಗಾವಿ, ಡಿ. 19 : ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳ ಆಡಳಿತದಲ್ಲಿ ನಡೆಯುತ್ತಿರುವ ಎಲ್ಲಾ ಶಾಲೆಗಳನ್ನು ಶಿಕ್ಷಣ ಇಲಾಖೆಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ಮುಜರಾಯಿ ಇಲಾಖೆ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
ಗುರುವಾರ
ವಿಧಾನ
ಪರಿಷತ್
ಕಲಾಪದಲ್ಲಿ
ಕೆ.
ಪ್ರತಾಪಚಂದ್ರ
ಶೆಟ್ಟಿ
ಅವರು
ಮುಜರಾಯಿ
ಇಲಾಖೆ
ವ್ಯಾಪ್ತಿಯಲ್ಲಿ
ನಡೆಯುತ್ತಿರುವ
ಶಾಲೆಗಳಲ್ಲಿ
ಕಾರ್ಯನಿರ್ವಹಿಸುತ್ತಿರುವ
ಬೋಧಕ
ಹಾಗೂ
ಬೋಧಕೇತರ
ಸಿಬ್ಬಂದಿಯವರಿಗೆ
ಇರುವ
ವೇತನ
ತಾರತಮ್ಯ
ಸರಿಪಡಿಸಬೇಕೆಂದು
ಸರ್ಕಾರಕ್ಕೆ
ಮನವಿ
ಮಾಡಿದರು.
ಇದಕ್ಕೆ ಉತ್ತರಿಸಿದ ಸಚಿವ ಟಿ.ಬಿ.ಜಯಚಂದ್ರ ಅವರು, ವೇತನ ತಾರತಮ್ಯ ನಿವಾರಣೆಗೆ ಅಂದಾಜು 3 ಕೋಟಿ ರೂ.ಗಳಷ್ಟು ಹಣದ ಅವಶ್ಯತೆ ಇದೆ. ಆದರೆ, ದೇವಾಲಯದ ಆಡಳಿತದಿಂದ ಇಷ್ಟು ಪ್ರಮಾಣದ ಹಣವನ್ನು ಭರಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಶಾಲೆಗಳನ್ನು ಶಿಕ್ಷಣ ಇಲಾಖೆಗೆ ವರ್ಗಾಯಿಸಲು ಸರ್ಕಾರ ತೀರ್ಮಾನಿದೆ ಎಂದರು. [ಸದನದಲ್ಲಿ ಕಣ್ಣೀರಿಟ್ಟ ಶಾಸಕ]
ರಾಜ್ಯದಲ್ಲಿ 6 ಅನುದಾನಿತ ಶಿಕ್ಷಣ ಸಂಸ್ಥೆಯಲ್ಲಿ 62 ಬೋಧಕರು, 63 ಬೋಧಕೇತರ ಸಿಬ್ಬಂದಿ ಮತ್ತು 12 ಅನುದಾನ ರಹಿತ ಶಿಕ್ಷಣ ಸಂಸ್ಥೆಯಲ್ಲಿ 78 ಬೋಧಕರು, 28 ಬೋಧಕೇತರ ಸಿಬ್ಬಂದಿಯವರು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಚಿವರು ಹೇಳಿದರು. [ಮುಜರಾಯಿ ಇಲಾಖೆ ಹೊಣೆ ಜಯಚಂದ್ರ ಹೆಗಲಿಗೆ]
ಶಿಕ್ಷಣ ಇಲಾಖೆಯ ಒಪ್ಪಿಗೆಯ ಮೇರೆಗೆ ಶಾಲೆಗಳನ್ನು ನಡೆಸಲಾಗುತ್ತದೆ. ಹಾಗೆಯೇ ಜಿಲ್ಲಾಡಳಿತದಿಂದ ಈ ಶಿಕ್ಷಣ ಸಂಸ್ಥೆಗಳಿಗೆ ಬೋಧಕ, ಬೋಧಕೇತರ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಶಾಲೆಗಳನ್ನು ಶಿಕ್ಷಣ ಇಲಾಖೆಗೆ ವರ್ಗಾಯಿಸುವ ಸಂದರ್ಭದಲ್ಲಿ ದೇವಾಲಯದ ಆಸ್ತಿಯಾಗಿರುವ ಶಾಲಾ ಆವರಣವನ್ನು ವರ್ಗಾಯಿಸುವ ಬಗ್ಗೆ ಮುಜರಾಯಿ ಹಾಗೂ ಶಿಕ್ಷಣ ಇಲಾಖೆಯ ನಡುವೆ ಗೊಂದಲವುಂಟಾಗಿದೆ ಎಂದರು.
ಈ ಬಗೆಗಿನ ಗೊಂದಲವನ್ನು ಎರಡೂ ಇಲಾಖೆಗಳೊಂದಿಗೆ ಚರ್ಚಿಸಿದ ನಂತರ ದೇವಾಲಯದ ಆಡಳಿತದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಣ ಸಂಸ್ಥೆಗಳನ್ನು ಶಿಕ್ಷಣ ಇಲಾಖೆಗೆ ವರ್ಗಾಯಿಸಲಾಗುವುದೆಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು.