ಮಹಾರಾಷ್ಟ್ರ ಸಚಿವರ ಕನ್ನಡ ಪ್ರೇಮ: ಎಂಇಎಸ್ ಸಂಘಟನೆ ಗರಂ
ಬೆಳವಾಗಿ, ಜನವರಿ 23: 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟ ಬೇಕು' ಎನ್ನುವ ಮಹಾರಾಷ್ಟ್ರ ಗಡಿ ಉಸ್ತುವಾರ ಸಚಿವ ಚಂದ್ರಕಾಂತ ಪಟೀಲರ ಹಾಡಿಗೆ ಎಂಇಎಸ್ ಯುವ ಮಂಚ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ಎರಡು ದಿನಗಳ ಹಿಂದೆ ಗೋಕಾಕ್ ತಾಲೂಕಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಚಂದ್ರಕಾಂತ್ ಅವರು ತಮ್ಮ ಭಾಷಣದ ಸಂದರ್ಭದಲ್ಲಿ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂದು ಹಾಡಿದ್ದರು. ಸಚಿವರಿಗಿದ್ದ ಕನ್ನಡ ಪ್ರೇಮ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಎಂಇಎಸ್ ಯುವ ಮಂಚ್ ಕಾರ್ಯಕರ್ತರು ಪ್ರತಿಭಟನೆಗೆ ಸಜ್ಜಾಗಿದ್ದಾರೆ.
ಸಚಿವರ ವಿರುದ್ಧ ಪ್ರತಿಭಟನೆಗೆ ಎಂಇಎಸ್ ಕಾರ್ಯಕರ್ತರು ಸಿದ್ಧವಾಗಿದ್ದು ಬೆಳಗಾವಿಯ ಶಿವಾಜಿ ಉದ್ಯಾನದಿಂದ ಸುಮಾರು 25 ಕಾರ್ಯಕರ್ತರು ಕೊಲ್ಲಾಪುರಕ್ಕೆ ತೆರಳಿ, ಕೊಲ್ಲಾಪುರದಲ್ಲಿರುವ ಸಚಿವ ಚಂದ್ರಕಂತ ಪಾಟೀಲ್ ಅವರ ಮನೆಯ ಮುಂದೆ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ. ಬೆಳಗಾವಿಯಿಂದ ಕೊಲ್ಲಾಪುರದವರೆಗೆ ಬೈಕ್ ಮೂಲಕ ಕಾರ್ಯಕರ್ತರು ತೆರಳಲಿದ್ದಾರೆ.
Comments
belgaum maharashtra minister kannada song mes protest ಬೆಳಗಾವಿ ಮಹಾರಾಷ್ಟ್ರ ಸಚಿವ ಕನ್ನಡ ಹಾಡು ಎಂಇಎಸ್ ಪ್ರತಿಭಟನೆ
English summary
Maharashtra Ekikaran Samiti Yuva Manch activist taken out bike rally from Belgaum to Kolhapur protesting against Maharashtra minister Chandrakant Patil who sung Kannada song recently.
Story first published: Tuesday, January 23, 2018, 11:38 [IST]