ಮಹಾದಾಯಿ ವಿವಾದದ ಚೆಂಡು ಬಿಜೆಪಿ ಅಂಗಳದಲ್ಲಿದೆ: ಸಿದ್ದರಾಮಯ್ಯ
ಬೆಳಗಾವಿ, ನವೆಂಬರ್ 15: ಅಂತರಾಜ್ಯ ಮಹಾದಾಯಿ ನದಿ ನೀರು ವಿವಾದವನ್ನು ಬಗೆಹರಿಸುವ ಆಯ್ಕೆಯ ಚೆಂಡು ಬಿಜೆಪಿ ಅಂಗಳದಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿ ಶಾಸಕರ ಪ್ರತಿಭಟನೆಗೆ ಬೆಳಗಾವಿ ಅಧಿವೇಶನದಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದರು.
ಮಹಾದಾಯಿ ವಿವಾದದ ಸಂಬಂಧ ಇಂದು ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕ ಕೋನರೆಡ್ಡಿ ಪ್ರಶ್ನೆ ಕೇಳಿದಾಗ ಜಲ ಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಸದನದಲ್ಲಿ ಉಪಸ್ಥಿತರಿರಲಿಲ್ಲ. ಆಗ ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಪ್ರತಿಭಟನೆ ಆರಂಭಿಸಿದರು.
ಈ
ವೇಳೆ
ಜೆಡಿಎಸ್
ಶಾಸಕ
ವೈಎಸ್
ವಿ
ದತ್ತಾ
ಖಾಲಿ
ಆಸನಗಳ
ಬಗ್ಗೆ
ಆಕ್ಷೇಪ
ವ್ಯಕ್ತಪಡಿಸಿದರು.
ಮತ್ತು
ಪ್ರತಿಭಟನಾಕಾರರು
ಕೆಲ
ಕಾಲ
ಸದನ
ಮುಂದೂಡಿ,
ಸಚಿವರನ್ನು
ಕರೆಸುವಂತೆ
ಒತ್ತಾಯಿಸಿದರು.
ಈ
ವೇಳೆ
ಮುಖ್ಯಮಂತ್ರಿ
ಸಿದ್ದರಾಮಯ್ಯ,
"ಮಹಾದಾಯಿ
ವಿವಾದಕ್ಕೆ
ಸಂಬಂಧಿಸಿದಂತೆ
ಈಗ
ಚೆಂಡು
ನಿಮ್ಮ
ಅಂಗಳದಲ್ಲಿದೆ.
ಕೇಂದ್ರದಲ್ಲಿ
ನಿಮ್ಮ
ಪಕ್ಷ
(ಬಿಜೆಪಿ)
ಇದಕ್ಕೆ
ಏನಾದರೂ
ಮಾಡಬೇಕಷ್ಟೆ,"
ಎಂದು
ಹೇಳಿದರು.
"ದೆಹಲಿಗೆ ಹೋಗಿ ನಿಮ್ಮ ಸರಕಾರದ ಬಳಿ ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಶ್ನಿಸಿ," ಎಂದು ಬಿಜೆಪಿಗೆ ಟಾಂಗ್ ನೀಡಿದರು. ಮುಖ್ಯಮಂತ್ರಿಗಳ ಈ ಹೇಳಿಕೆಗೆ ಕಾಂಗ್ರೆಸ್ ಶಾಸಕರು ಮೇಜು ಕುಟ್ಟಿ ಸ್ವಾಗತಿಸಿದರೆ ಬಿಜೆಪಿ ನಾಯಕರು ಕಾಂಗ್ರೆಸ್ ಮೇಲೆ ಮುಗಿಬಿದ್ದರು.
ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಯುಪಿಎ 10 ವರ್ಷಗಳ ಅಧಿಕಾರವಧಿಯಲ್ಲಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಕಳೆದ ಸೆಪ್ಟೆಂಬರ್ ನಲ್ಲಿ ಮಹಾದಾಯಿ ನೀರು ವಿವಾದ ನ್ಯಾಯಾಧೀಕರಣ, ಈ ವಿವಾದಕ್ಕೆ ಸಂಬಂಧಿಸಿದ ರಾಜ್ಯಗಳು ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಲು ಸೂಚಿಸಿತ್ತು.
ಈ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಸರಕಾರ ಗೋವಾ ಮತ್ತು ಮಹಾರಾಷ್ಟ್ರ ಸರಕಾರಗಳಿಗೆ ಪತ್ರ ಬರೆದಿತ್ತು. ಜತೆಗೆ ನರೇಂದ್ರ ಮೋದಿಯವರಿಗೂ ಪತ್ರ ಬರೆದು ವಿವಾದದಲ್ಲಿ ಮಧ್ಯ ಪ್ರವೇಶ ಮಾಡುವಂತೆ ಕೇಳಿಕೊಂಡಿತ್ತು. ಆದರೆ ಪ್ರಯತ್ನಗಳು ಫಲಪ್ರದವಾಗಿರಲಿಲ್ಲ.