ಸಂಬಳ ಕೊಡುತ್ತಿಲ್ಲ ಎಂದು ಜನರೇಟರ್ ಟವರ್ ಏರಿ ಕುಳಿತ ಎಂ.ಕೆ.ಹುಬ್ಬಳ್ಳಿ ಯುವಕ
ಬೆಳಗಾವಿ, ಆಗಸ್ಟ್.16: ನಮ್ಮಲ್ಲಿ ಬಹಳಷ್ಟು ಮಂದಿ ಸರಿಯಾದ ಸಮಯಕ್ಕೆ ಸಂಬಳವಾಗದಿದ್ದರೆ ಗರಂ ಆಗುತ್ತಾರೆ. ಇನ್ನು ಸಂಬಳವೇ ಸಿಗುತ್ತಿಲ್ಲ ಎನ್ನುವವರ ಕಥೆ ಏನಾಗಬಹುದು, ಏನು ಮಾಡುತ್ತಾರೆ ಎಂಬುದಕ್ಕೆ ನಿದರ್ಶನ ಇಲ್ಲಿದೆ ನೋಡಿ..
ಸಂಬಳ ನೀಡುತ್ತಿಲ್ಲವೆಂದು ಕಾರ್ಮಿಕನೋರ್ವ ಜನರೇಟರ್ ಟವರ್ ಏರಿ ಕುಳಿತು ಪ್ರತಿಭಟನೆ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ.
ಏರ್ ಇಂಡಿಯಾ ಮತ್ತೆ ಸಂಬಳ ತಡ: ಸುರಕ್ಷತೆ ಬಗ್ಗೆ ಸಿಬ್ಬಂದಿ ಕಳವಳ
ಎಂ.ಕೆ.ಹುಬ್ಬಳ್ಳಿಯಲ್ಲಿರುವ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಮಿಕ ಆಗಿರುವ ರೋಹಿತ ಭಜನ್ನವರ ಎಂಬಾತ ಕಾರ್ಖಾನೆಯ ಆವರಣದಲ್ಲಿರುವ ಜನರೇಟರ್ ಟವರ್ ಏರಿ ಸಂಬಳಕ್ಕಾಗಿ ವಿನೂತನ ಪ್ರತಿಭಟನೆ ನಡೆಸಿದ್ದಾನೆ.
ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರು ಕಳೆದ ಆರು ತಿಂಗಳಿನಿಂದ ವೇತನ ನೀಡಿಲ್ಲ. ಹೀಗಾಗಿ ರೋಹಿತ ಪ್ರತಿಭಟನೆ ನಡೆಸುತ್ತಿದ್ದಾನೆ ಎಂದು ತಿಳಿದು ಬಂದಿದೆ.
ಕಳೆದ ಒಂದು ಗಂಟೆಯಿಂದ ಪ್ರತಿಭಟನೆ ಮಾಡುತ್ತಿರುವ ರೋಹಿತ ಸಂಬಳ ಕೊಟ್ಟರೆ ಮಾತ್ರ ಕೆಳಗಿಳಿಯುವುದಾಗಿ ಹಠ ಹಿಡಿದಿದ್ದು ಕಾರ್ಖಾನೆಯ ಆಡಳಿತ ಮಂಡಳಿಯವರು ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.