'ಸೋನಿಯಾ ಸೂಚನೆ ಮೇರೆಗೆ ಮಹಾದಾಯಿಗೆ ಗೋವಾ ಕಾಂಗ್ರೆಸ್ ವಿರೋಧ'
ಬೆಳಗಾವಿ, ಡಿಸೆಂಬರ್ 23 : ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅಧ್ಯಕ್ಷ ರಾಹುಲ್ ಗಾಂಧಿ ಸೂಚನೆಯಂತೆ ಮಹಾದಾಯಿ ನೀರು ಹಂಚಿಕೆ ವಿಚಾರಕ್ಕೆ ಗೋವಾದ ಕಾಂಗ್ರೆಸ್ ಪಕ್ಷ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಸಂಸದ ಸುರೇಶ ಅಂಗಡಿ ಗಂಭೀರ ಆರೋಪ ಮಾಡಿದರು.
ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 40 ವರ್ಷದಿಂದ ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯ ಬಿಜೆಪಿ ನಾಯಕರು ರಾಜಕೀಯ ಮಾಡುತ್ತಿಲ್ಲ ಎಂದು ಸುರೇಶ ಅಂಗಡಿ ಹೇಳಿದರು.
ಉತ್ತರ
ಕರ್ನಾಟಕದ
ಮಹದಾಯಿ
ನದಿ
ನೀರು
ಹಂಚಿಕೆಯಲ್ಲಿ
ಕಾಂಗ್ರೆಸ್
ಪಕ್ಷದವರು
ವಿನಾಕಾರಣ
ರಾಜಕೀಯ
ಮಾಡುತ್ತಿದ್ದಾರೆ.
ಆದರೆ
ಬಿಜೆಪಿಯವರು
ಎಂದೂ
ರಾಜಕೀಯ
ಮಾಡಿಲ್ಲ
ಎಂದರು.
ಗೋವಾದಲ್ಲಿ
ಈ
ಹಿಂದೆ
ಸೋನಿಯಾ
ಗಾಂಧಿ
ಅವರು
ಕರ್ನಾಟಕಕ್ಕೆ
ಒಂದು
ಹನಿ
ನೀರು
ಬಿಡಬಾರದು
ಹೇಳಿಕೆ
ನೀಡಿರುವುದರಿಂದ
ಅಲ್ಲಿನ
ಗೋವಾದ
ಕಾಂಗ್ರೆಸ್
ಪಕ್ಷದವರು
ವಿರೋಧ
ವ್ಯಕ್ತಪಡಿಸಿರಬಹುದು
ಎಂದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು 2002ರಲ್ಲಿ ಅನುಮೋಧನೆ ನೀಡಲಾಗಿತ್ತು. ನೀರಾವರಿ ಸಚಿವ ಎಂ.ಬಿ.ಪಾಟೀಲ ಅನುಭವದಲ್ಲಿ ಚಿಕ್ಕವರಿದ್ದಾರೆ. ಅವರು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನವರಲ್ಲಿ ಚರ್ಚೆ ನಡೆಸಬೇಕೆಂದರು.
ಮಾನವೀಯತೆ ದೃಷ್ಠಿಯಿಂದ ಗೋವಾ ಸರಕಾರ ಉತ್ತರ ಕರ್ನಾಟಕದ ಜನರಿಗೆ ಮಹದಾಯಿ ನೀರು ಹಂಚಿಕೆ ಮಾಡಿರುವುದು ಹೆಮ್ಮೆಯ ಸಂಗತಿ ಎಂದರು. ಸುದ್ದಿಗೋಷ್ಠಿಯ ಬಿಜೆಪಿ ನಗರಾಧ್ಯಕ್ಷ ರಾಜೇಂದ್ರ ಹರಕುಣಿ, ಬಿಜೆಪಿ ನಗರ ಘಟಕದ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಟೋಪಣ್ಣವರ, ರಾಜು ಚಿಕ್ಕನಗೌಡರ ಸೇರಿದಂತೆ ಮೊದಲಾದವರು ಹಾಜರಿದ್ದರು.