ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಾಲಬಾದೆ ತಾಳಲಾರದೆ ವಿಷ ಸೇವಿಸಿ ರೈತ ಆತ್ಮಹತ್ಯೆ
ಬೆಳಗಾವಿ, ಡಿಸೆಂಬರ್ 29 : ಸಾಲಬಾದೆ ತಾಳಲಾರದೆ ವಿಷ ಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಶುಕ್ರವಾರ ನಡೆದಿದೆ.
ಕರ್ನಾಟಕದಲ್ಲಿ ಐದು ವರ್ಷದಲ್ಲಿ 3,515 ರೈತರ ಆತ್ಮಹತ್ಯೆ
ಸಾಲಬಾದೆ ತಾಳಲಾರದೆ ವೆಂಕನಗೌಡ ಲಕ್ಷ್ಮಣಗೌಡ(32) ರೈತ ತನ್ನ ಜಮೀನಿನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಮದುರ್ಗ ತಾಲೂಕಿನ ಓಬಳಾಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
12 ಎಕರೆ ಕೃಷಿ ಜಮೀನು ಹೊಂದಿರುವ ಅವರು ರಾಮದುರ್ಗ ಎಸ್.ಬಿ.ಐ ಬ್ಯಾಂಕಿನಲ್ಲಿ3 ಲಕ್ಷ, ಮುದೇನೂರು ಪಿ.ಕೆ.ಪಿ.ಎಸ್ ನಲ್ಲಿ30 ಸಾವಿರ, ಕೈಗಡ 1 ಲಕ್ಷಕ್ಕಿಂತಲೂ ಅಧಿಕ ಸೇರಿದಂತೆ 5 ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದರು ಎಂದು ಕುಟುಬ ಮೂಲದಿಂದ ತಿಳಿದುಬಂದಿದೆ. ಮೃತ ರೈತನಿಗೆ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ.
Comments
English summary
A 32 year old farmer Lakshmana gouda patil was commited suicide by consuming poison in Obalapur village of Ramdurg taluk. Farmer who has 12 acres of land and also had Rs.3 lakh loan in State Bank Of India.
Story first published: Friday, December 29, 2017, 13:21 [IST]