ಬೆಳಗಾವಿ ಅಧಿವೇಶನದಲ್ಲಿ ಋಣಮುಕ್ತ ಕಾಯಿದೆ ಮಂಡನೆಗೆ ಸಿದ್ಧತೆ
ಬೆಳಗಾವಿ, ಡಿಸೆಂಬರ್ 10: ಬೆಳಗಾವಿ ಚಳಿಗಾಲದ ಅಧಿವೇಶನ ಆರಂಭವಾಗಿದೆ, ಮೀಟರ್ ಬಡ್ಡಿ ದಂಧೆಯನ್ನು ಸಂಪೂರ್ಣವಾಗಿ ಇಲ್ಲದಂತೆ ಮಾಡಿ ಬಡ್ಡಿ ಇಲ್ಲದೆ ಸಾಲ ನೀಡುವ ಋಣಮುಕ್ತ ಕಾಯಿದೆ ಈ ಅಧಿವೇಶನದಲ್ಲಿ ಮಂಡನೆಯಾಗಲಿದೆ.
ದೇವರಾಜ ಅರಸು ಕಾಲದಲ್ಲಿ ಇದ್ದ ಋಣಮುಕ್ತ ಪರಿಹಾರ ಕಾಯ್ದೆ ಮಾದರಿಯಲ್ಲಿ ರಾಜ್ಯ ಸರ್ಕಾರ ಬಡವರು, ಸಾಮಾನ್ಯ ಜನರ ಹಿತವನ್ನು ಕಾಯಲು ಮುಂದಾಗಿದೆ. ಅನ್ನದಾತರ ಕೃಷಿ ಸಾಲಮನ್ನಾ ಮಾಡಿದಂತೆ ಸಾಮಾನ್ಯ ಖಾಸಗಿ ಸಾಲ ಮಾಡಿವರನ್ನೂ ಕೂಡ ಋಣಮುಕ್ತರನ್ನಾಗಿ ಮಾಡಲು ಸರ್ಕಾರ ತೀರ್ಮಾನಿಸಿದೆ.
ರೈತರಿಗೆ ಸಾಲ ಋಣಮುಕ್ತ ಪತ್ರ ವಿತರಿಸಿದ ಕುಮಾರಸ್ವಾಮಿ
ಈ ಹಿನ್ನೆಲೆಯ್ಇ 1976ರಲ್ಲಿ ಸಿವಂಗತ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಋಣ ಪರಿಹಾರ ಅಧಿನಿಯಮ ಜಾರಿಯಲ್ಲಿತ್ತು.ಅದಂತೆಯೇ ಈಗ ಅದೇ ಮಾದರಿಯಲ್ಲಿ 2018ರ ಕೃಷಿ ಕಾರ್ಮಿಕರು, ಸಣ್ಣ ಕೃಷಿಕರು ಹಾಗೂ ದುರ್ಬಲ ವರ್ಗದವರನ್ನು ಋಣದಿಂದ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.
'ಸಾಲಮನ್ನಾ ಮಾಡಿ ಅಂದ್ರೆ ಮಂಚಕ್ಕೆ ಕರೀತಾರೆ', ರೈತ ಮಹಿಳೆ ಕಣ್ಣೀರು
ಈ ರೀತಿ ಋಣ ವಿಮೋಚನೆ ಸಾಲಕ್ಕೆ ಸಂಬಂಧಿಸಿದಂತೆ ಯಾವುದೇ ನ್ಯಾಯಾಲಯವು ವ್ಯಾಜ್ಯವನ್ನು ಭದ್ರತೆಗಾಗಿ ಅಡಮಾನ ಮಾಡಿದಲ್ಲಿ ಅಂತಹ ಸ್ಥಿರಾಸ್ತಿಯನ್ನು ಬಿಡುಗಡೆಗೊಳಿಸಲು ಅವಕಾಶವಿದೆ. ಈ ಸೌಲಭ್ಯ ಪಡೆಯಲು ಸಣ್ಣ ಕೃಷಿಕರು ಅಥವಾ ಭೂರಹಿತ ಕೃಷಿ ಕಾರ್ಮಿಕರ ಆದಾಯ 1.25 ಲಕ್ಷ ಮೀರಿರಬಾರದು.