ಪೊಲೀಸ್ ಸಿಬ್ಬಂದಿ ಜೊತೆ ಭೋಜನ ಮಾಡಿದ ಡಿಸಿಎಂ ಪರಮೇಶ್ವರ
ಬೆಳಗಾವಿ, ಡಿಸೆಂಬರ್ 13:ಬೆಳಗಾವಿ ಸುವರ್ಣಸೌಧ ಅಧಿವೇಶನದಲ್ಲಿ ಪೊಲೀಸ್ ಸಿಬ್ಬಂದಿಗೆ ನೀಡುತ್ತಿರುವ ಮಧ್ಯಾಹ್ನದ ಊಟದ ಗುಣಮಟ್ಟವನ್ನು ಖುದ್ದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರೇ ಪರಿಶೀಲಿಸಿದರು.
ಹೈದರಾಬಾದ್ ಕರ್ನಾಟಕ ಭಾಗದ ಜನರಿಗೆ ಶುಭಸುದ್ದಿ ಕೊಟ್ಟ ಕುಮಾರಸ್ವಾಮಿ
ಬೆಳಗಾವಿ ಅಧಿವೇಶನ ಸರಾಗವಾಗಿ ನಡೆಯುವುದು, ಇಲ್ಲಿನ ಪ್ರತಿಭಟನಾಕಾರರನ್ನು ನಿಯಂತ್ರಿಸುವುದು ಸೇರಿದಂತೆ ಸುರಕ್ಷತೆ, ಭದ್ರತೆ ಕಾಪಾಡಲು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ.
ಕುಮಾರಸ್ವಾಮಿ ಇರುವುದು ಹೆಬ್ಬೆಟ್ಟು ಒತ್ತುವುದಕ್ಕಲ್ಲ: ಹೊರಟ್ಟಿ ಅಸಮಾಧಾನ
ಇವರಿಗೆ ಉತ್ತಮ ಊಟ ವಿತರಿಸುವ ಬಗ್ಗೆ ಪರಮೇಶ್ವರ್ ಅವರು ಪರಿಶೀಲಿಸಿದರು. ಪೊಲೀಸ್ ಸಿಬ್ಬಂದಿಗೆ ಊಟ ವಿತರಿಸುವ ಸ್ಥಳಕ್ಕೆ ದಿಢೀರ್ ಭೇಟಿ ನೀಡಿದ ಅವರು, ಸ್ವತಃ ತಾವೇ ಊಟ ಮಾಡಿದರು. ಇಲ್ಲಿ ನೀಡುತ್ತಿರುವ ಊಟದ ಗುಣಮಟ್ಟದ ಬಗ್ಗೆ ಪೊಲೀಸ್ ಸಿಬ್ಬಂದಿ ಬಳಿ ಮಾಹಿತಿ ಪಡೆದರು.
Comments
English summary
Deputy chief minister Dr.G. Parameshwar had his lunch with police personnel at Suvarna Soudha in Belgaum following allegedly substandard food supply during session.
Story first published: Thursday, December 13, 2018, 15:25 [IST]