ಜನಾರ್ದನ ಪೂಜಾರಿಗೆ ತಿರುಗೇಟು ಕೊಟ್ಟ ಸಿದ್ದರಾಮಯ್ಯ!
ಬೆಳಗಾವಿ, ಏಪ್ರಿಲ್ 25 : 'ನಾನು ಜನರಿಂದ ಮುಖ್ಯಮಂತ್ರಿಯಾಗಿದ್ದೇನೆ, ಲೋಕಾಯುಕ್ತ ಸಂಸ್ಥೆಯಿಂದಲ್ಲ. ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಲು ಭ್ರಷ್ಟಾಚಾರ ನಿಗ್ರಹದಳವನ್ನು ಸ್ಥಾಪನೆ ಮಾಡಿಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಾರ್ದನ ಪೂಜಾರಿ ಅವರಿಗೆ ತಿರುಗೇಟು ನೀಡಿದರು.
ಬೆಳಗಾವಿ
ವಿಮಾನ
ನಿಲ್ದಾಣದಲ್ಲಿ
ಸೋಮವಾರ
ಮಾತನಾಡಿದ
ಸಿದ್ದರಾಮಯ್ಯ
ಅವರು,
ಜನಾರ್ದನ
ಪೂಜಾರಿ
ಅವರ
ಮಾತಿಗೆ
ತಿರುಗೇಟು
ಕೊಟ್ಟರು.
'ನಾನು
ಜನರಿಂದ
ಮುಖ್ಯಮಂತ್ರಿಯಾಗಿದ್ದೇನೆ.
ಯಾರೇ
ಆಗಲಿ
ಜನರಿಂದ
ಮುಖ್ಯಮಂತ್ರಿಯಾಗಬೇಕು.
ಲೋಕಾಯುಕ್ತದಂತಹ
ಶಾಸನಬದ್ಧ
ಸಂಸ್ಥೆಯಿಂದಲ್ಲ'
ಎಂದು
ಸಿದ್ದರಾಮಯ್ಯ
ಹೇಳಿದರು.
[ಎಸಿಬಿ
ರಚನೆ
:
ಸಿದ್ದರಾಮಯ್ಯ
ಸ್ಪಷ್ಟನೆಗಳು]
'ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚುವ ಹುನ್ನಾರವನ್ನು ಸರ್ಕಾರ ನಡೆಸಿಲ್ಲ. ಲೋಕಾಯುಕ್ತವನ್ನು ಮುಚ್ಚಲು ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ರಚನೆ ಮಾಡಿಲ್ಲ. ಎಸಿಬಿ ರಚನೆ ಪ್ರಸ್ತಾಪದಿಂದ ಹಿಂದೆ ಸರಿಯುವುದಿಲ್ಲ' ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ['ಲೋಕಾಯುಕ್ತ ಸಂಸ್ಥೆ ಮುಚ್ಚಲು ಸರ್ಕಾರದ ಷಡ್ಯಂತ್ರ']
ಪೂಜಾರಿ ಹೇಳಿದ್ದೇನು? : ಭಾನುವಾರ ಬೆಂಗಳೂರಿನಲ್ಲಿ ನಡೆದ ಬಿಲ್ಲವರ ಭವನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ್ದ ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಅವರು, 'ಬಿ.ಎಸ್. ಯಡಿಯೂರಪ್ಪ ಅವರನ್ನು ಜೈಲಿಗೆ ಕಳಿಸಿದ ಮತ್ತು ನಿಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸುವ ಭ್ರಷ್ಟಾಚಾರ ನಿಗ್ರಹ ದಳವನ್ನು ಏಕೆ ಜಾರಿಗೆ ತಂದಿರಿ? ಸಿದ್ದರಾಮಯ್ಯ ಅವರೇ' ಎಂದು ಪ್ರಶ್ನಿಸಿದ್ದರು. [ಗೃಹ ಇಲಾಖೆ ಅಧೀನಕ್ಕೆ ಬರಲಿದೆ ಎಸಿಬಿ?]
4 ತಂಡಗಳನ್ನು ರಚನೆ ಮಾಡಿದ್ದೇವೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರದಿಂದ 2ನೇ ಹಂತದ ಬರ ಪ್ರವಾಸ ಕೈಗೊಂಡಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, 'ರಾಜ್ಯದಲ್ಲಿನ ಬರಪರಿಸ್ಥಿತಿಯ ಅಧ್ಯಯನಕ್ಕಾಗಿ 4 ಸಂಪುಟ ಉಪ ಸಮಿತಿಗಳನ್ನು ರಚನೆ ಮಾಡಿದ್ದೇನೆ. ಏ.30ರೊಳಗೆ ಈ ಸಮಿತಿ ತನ್ನ ವರದಿ ನೀಡಲಿದೆ. ನಂತರ ಬರಪರಿಹಾರ ಕಾರ್ಯಗಳು ಚುರುಕಾಗಲಿವೆ' ಎಂದು ಹೇಳಿದರು.