ಬೆಳಗಾವಿ: ಬಯಲಲ್ಲಿ ಕೂತು ಪಾಠ ಕೇಳುತ್ತಿರುವ ಸರ್ಕಾರಿ ಶಾಲೆ ಮಕ್ಕಳು
ಬೆಳಗಾವಿ, ಆಗಸ್ಟ್ 13: ಕೂರಲು ಕೊಠಡಿಗಳಿಲ್ಲದೆ ಮರದ ಕೆಳಗೆ ಬಿಸಿಲು, ಮಳೆಗೆ ಮೈಯೊಡ್ಡಿ ಪಾಠ ಕೇಳುವ ಪರಿಸ್ಥಿತಿ ಬೆಳಗಾವಿಯ ಜಿಲ್ಲೆ ಸವದತ್ತಿ ತಾಲೂಕಿನ ಹಿರೇಕುಂಬಿ ಗ್ರಾಮದ ಮಕ್ಕಳದ್ದು.
ಈ ಊರಿನ ಸರ್ಕಾರಿ ಶಾಲೆಯಲ್ಲಿ 171 ಮಕ್ಕಳಿದ್ದಾರೆ ಆದರೆ ಇಲ್ಲಿರುವುದು ಎರಡೇ ಕೊಠಡಿ ಅದರಲ್ಲೊಂದು ಮುಖ್ಯಶಿಕ್ಷಕರ ಕಚೇರಿ. ಇಷ್ಟು ದಿನ ಗ್ರಾಮದ ಮಠದ ಕೊಠಡಿಯಲ್ಲೇ ಪಾಠ ಪ್ರವಚನ ನಡೆಯುತ್ತಿತ್ತು. ಆದರೆ ಶ್ರಾವಣ ಶುರುವಾದ ಬಳಿಕ ಅಲ್ಲಿಂದ ಮಕ್ಕಳು ಹೊರ ಹಾಕಲ್ಪಟ್ಟಿದ್ದಾರೆ.
ಶಾಲಾ-ಕಾಲೇಜು ಬಸ್ ಪಾಸ್ ಅವಧಿ ವಿಸ್ತರಣೆ ಮಾಡಿದ ಬಿಎಂಟಿಸಿ
ಶ್ರಾವಣ ಪ್ರಯುಕತ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾದ ಕಾರಣ, ಮಠದ ಆಡಳಿತ ಮಂಡಳಿ ಮಕ್ಕಳನ್ನು ಕೊಠಡಿಗಳಿಂದ ತೆರವುಗೊಳಿಸಿದೆ ಹಾಗಾಗಿ ಮಕ್ಕಳು ಈಗ ಮರದ ಕೆಳಗೆ ಪಾಠ ಕೇಳುವಂತಾಗಿದೆ.
1 ರಿಂದ 5ನೇ ತರಗತಿ ವರೆಗೂ ಈ ಪ್ರಾಥಮಿಕ ಶಾಲೆಯಲ್ಲಿ ತರಗತಿಗಳಿವೆ. ಈಗ ಇರುವ ಎರಡು ಕೊಠಡಿಗಳಲ್ಲಿ ಒಂದರಲ್ಲಿ ಒಂದು ತರಗತಿಗೆ ಪಾಠ ಮಾಡಲಾಗುತ್ತಿದೆ. ಊರಿನ ಸಮುದಾಯಭವನದಲ್ಲಿ ಮತ್ತೊಂದು ತರಗತಿಗೆ ಪಾಠ ನಡೆಯುತ್ತಿದೆ. ಇನ್ನುಳಿದ ತರಗತಿ ವಿದ್ಯಾರ್ಥಿಗಳು ಬಯಲಲ್ಲಿ ಪಾಠ ಕೇಳುತ್ತಿದ್ದಾರೆ.
ಶಾಲಾ ಮಕ್ಕಳು ತಿಂಗಳಲ್ಲಿ 2 ದಿನ ಸ್ಕೂಲ್ ಬ್ಯಾಗ್ ಹೊರಬೇಕಾಗಿಲ್ಲ
ಮಕ್ಕಳು ಬಯಲಲ್ಲಿ ಕೂತು ಪಾಠ ಕೇಳುತ್ತಿದ್ದರೂ ಸಹಿತ ಶಿಕ್ಷಣ ಇಲಾಖೆ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸದಿರುವುದು ಗ್ರಾಮಸ್ಥರನ್ನು ಕೆರಳಿಸಿದೆ.