ಕುತೂಹಲ ಕೆರಳಿಸಿದ ಮಾಜಿ ಶಾಸಕ ಸಂಭಾಜಿ ಪಾಟೀಲ ಪುತ್ರ ಸಾವು
ಬೆಳಗಾವಿ, ಡಿಸೆಂಬರ್.04: ಬೆಳಗಾವಿ ದಕ್ಷಿಣ ಕ್ಷೇತ್ರದ ಮಾಜಿ ಶಾಸಕ ಸಂಭಾಜಿ ಪಾಟೀಲ ಪುತ್ರ ಸಾಗರ ಪಾಟೀಲ ಶವ ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿ ಪತ್ತೆಯಾಗಿದೆ.
೬ ಜನ ಸಹಚರರೊಂದಿಗೆ ಬೆಂಗಳೂರಿಗೆ ತೆರಳಿದ್ದ ಸಾಗರ ಪಾಟೀಲ ನಿನ್ನೆ ಸೋಮವಾರ (ಡಿಸೆಂಬರ್ .03) ರಾತ್ರಿ ರೈಲಿನಲ್ಲಿ ಊಟ ಮಾಡುವಾಗ ಕೈ ತೊಳೆದುಕೊಳ್ಳಲೆಂದು ಹೋದವರು ಮರಳಿ ಬರಲೇ ಇಲ್ಲ. ಆದರೆ ಆ ನಂತರ ಹುಡುಕಾಟ ನಡೆಸಿದಾಗ ಸಾಗರ ಪಾಟೀಲ ಶವ ರೈಲ್ವೆ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿ ಪತ್ತೆಯಾಗಿದೆ.
ಉಡುಪಿಯ ಮಧ್ವ ಸರೋವರದಲ್ಲಿ ಮುಳುಗಿ ಶಿವಮೊಗ್ಗ ಯಾತ್ರಾರ್ಥಿ ಸಾವು
ಈ ಅಸಹಜ ಸಾವಿನ ಪ್ರಕರಣ ಕುತೂಹಲ ಕೆರಳಿಸಿದ್ದು, ಪೊಲೀಸರ ವಿಚಾರಣೆ ನಂತರ ಇನ್ನಷ್ಟು ಮಾಹಿತಿ ಹೊರಬರುವ ಸಾಧ್ಯತೆಯಿದೆ.
English summary
Belgaum Former MLA Sambhaji Patil's son Sagar Patil died last night near yeshwantpur railway station. But there is not much information about this incident.
Story first published: Tuesday, December 4, 2018, 10:50 [IST]