2 ಲಕ್ಷಕ್ಕೆ ಬೆಳಗಾವಿ ಮಗು ರಾಜಸ್ಥಾನದಲ್ಲಿ ಮಾರಾಟ
ಬೆಳಗಾವಿ ನಗರದ ಪಾಟೀಲ ಗಲ್ಲಿ ನಿವಾಸಿ ರುದ್ರಾಕ್ಷಿ ಅಲಿಯಾಸ್ ರಾಧಾ ಸತೀಶ ರೇವಣಕರ ಎಂಬುವವರು ರಾಜಸ್ಥಾನದ ಕೈಲಾಸ್ ಜೈನ್ ಹಾಗೂ ಮುಖೇಶ ಜೈನ್ ಎಂಬವವರಿಗೆ ಮಗುವನ್ನು ಮಾರಾಟ ಮಾಡಿದ್ದಾರೆ ಎಂದು ಬಾಲಕಿ ತಾಯಿ ಕಾಳವ್ವ ದೂರು ನೀಡಿದ್ದಾರೆ.
ಕಾಳವ್ವ ಅವರ ಪತಿ ತೀರಿಕೊಂಡಿದ್ದು, ಆರ್ಥಿಕವಾಗಿ ಕುಟುಂಬ ಸಂಕಷ್ಟದಲ್ಲಿದೆ. ಈ ಸಮಯದಲ್ಲಿ ಕಾಳವ್ವನಿಗೆ ಪರಿಚಯವಾದ ಆರೋಪಿ ರಾಧಾ ಸತೀಶ ಕಾಳವ್ವನ ಅಪ್ರಾಪ್ತ ಪುತ್ರಿಗೆ ಅಡುಗೆ ಕಲಿಸಿ, ಒಳ್ಳೆಯ ಹುಡುಗನನ್ನು ನೋಡಿ ಮದುವೆ ಮಾಡಿಕೊಡುವುದಾಗಿ ಹೇಳಿ ನಂಬಿಸಿ, ಆಕೆಯನ್ನು ರಾಜಸ್ಥಾನಕ್ಕೆ ಕರೆದುಕೊಂಡು ಹೋಗಿ ಮಾರಾಟ ಮಾಡಿದ್ದಾಳೆ. [ಕಡು ಬಡತನ, ಕಂದಮ್ಮನನ್ನೇ ಮಾರಿದ ತಾಯಿ!]
15 ದಿನಗಳ ಹಿಂದೆ ಕಾಳವ್ವನ ಮಗಳ ಜೊತೆ ರಾಜಸ್ಥಾನದ ಬಾಡ್ಮೀರ ಗಾಮಕ್ಕೆ ಹೋಗಿದ್ದ ರಾಧಾ ಸತೀಶ ಕೈಲಾಸ್ ಜೈನ್ ಎಂಬ ವ್ಯಕ್ತಿಗೆ ಮಗುವನ್ನು ಒಪ್ಪಿಸಿ, 2.20 ಲಕ್ಷ ರೂ.ಹಣ ಪಡೆದಿದ್ದಾಳೆ ಎಂದು ಕಾಳವ್ವ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ.
ಮಾರಾಟವಾದ ಮಗುವ ತನ್ನ ಚಿಕ್ಕಪ್ಪನಿಗೆ ಕರೆ ಮಾಡಿ ತನಗೆ ಇಲ್ಲಿ ಕಿರುಕುಳ ನೀಡುತ್ತಿದ್ದಾರೆ. ಆದ್ದರಿಂದ ಬಂದು ಕರೆದುಕೊಂಡು ಹೋಗುವಂತೆ ಮನವಿ ಮಾಡಿದ್ದಾಳೆ. ಈ ಮಾಹಿತಿಯನ್ನು ಕಾಳವ್ವನಿಗೆ ತಿಳಿಸಿದ್ದು, ಮಾರ್ಕೆಟ್ ಠಾಣೆಯಲ್ಲಿ ದೂರು ಕಾಳವ್ವ ದೂರು ಸಲ್ಲಿಸಿದ್ದಾರೆ. ಬಾಲಕಿಯನ್ನು ರಕ್ಷಿಸಲು ವಿಶೇಷ ಪೊಲೀಸರ ತಂಡವೊಂದು ರಾಜಸ್ಥಾನಕ್ಕೆ ಶೀಘ್ರ ತೆರಳುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.