ರಾಜ್ಯ ರೈತಸಂಘದಿಂದ ಬೆಳಗಾವಿಯಲ್ಲಿ ಪ್ರತಿಭಟನಾ ಮೆರವಣಿಗೆ
ಬೆಳಗಾವಿ,
ಡಿಸೆಂಬರ್
27
:
ಮಹದಾಯಿ
ಹೋರಾಟ,
ಉತ್ತರ
ಕರ್ನಾಟಕ
ಬಂದ್
ಹಿನ್ನೆಲೆ
ಬೆಳಗಾವಿ
ಕೇಂದ್ರ
ಬಸ್
ನಿಲ್ದಾಣ
ಬಳಿ
ಟೈರ್
ಗೆ
ಬೆಂಕಿ
ಹಚ್ಚಿ
ಪ್ರತಿಭಟನಾಕಾರರು
ಆಕ್ರೋಶ
ವ್ಯಕ್ತಪಡಿಸಿದ್ದಾರೆ,
ಕರ್ನಾಟಕ
ನವ
ನಿರ್ಮಾಣ
ಸೇನೆ
ಮತ್ತು
ಕರ್ನಾಟಕ
ರಾಜ್ಯ
ರೈತ
ಸಂಘ
ಹಸಿರು
ಸೇನೆ
ಕಾರ್ಯಕರ್ತರಿಂದ
ಬೆಂಕಿ
ಹಚ್ಚಲಾಗಿದೆ.
ಮಹಾದಾಯಿ ಹೋರಾಟ: ಉತ್ತರ ಕರ್ನಾಟಕ ಸ್ತಬ್ಧ
ಕೇಂದ್ರ ಮತ್ತು ಗೋವಾ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ರೈತರು , ಬಸ್ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ರೈತರು ಆಗ್ರಹಿಸಿದ್ದಾರೆ. ರೈತ ಮುಖಂಡ ರಾಘವೇಂದ್ರ ನಾಯಕ್, ಕನ್ನಡ ಪರ ಹೋರಾಟಗಾರ ಬಾಬು ಸಂಗೊಂಡಿ ನೇತ್ರತ್ವದಲ್ಲಿ ಪ್ರತಿಭಟನೆ ಪ್ರತಿಭಟನೆ ನಡೆಯುತ್ತಿದೆ.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯು ಬೆಳಗಾವಿ ಡಿಸಿ ಕಚೇರಿಯಿಂದ ಚನ್ನಮ್ಮ ವೃತ್ತದ ವರೆಗೆ ಕೇಂದ್ರ ಸರ್ಕಾರ ಮತ್ತು ಗೋವಾ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಕೂಗುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿದರು. ಚನ್ನಮ್ಮ ವೃತ್ತದಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಯಿತು.