ಉತ್ತರ ಕರ್ನಾಟಕಕ್ಕೆ ಸ್ಥಳಾಂತರವಾಗಲಿವೆ 9 ಸರ್ಕಾರಿ ಕಚೇರಿ
ಬೆಂಗಳೂರು, ಡಿಸೆಂಬರ್ 19 : ಉತ್ತರ ಕರ್ನಾಟಕ ಭಾಗಕ್ಕೆ ಸರ್ಕಾರಿ ಕಚೇರಿಗಳನ್ನು ಸ್ಥಳಾಂತರ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು. 9 ಕಚೇರಿಗಳನ್ನು ಸ್ಥಳಾಂತರ ಮಾಡಲು ಪ್ರಸ್ತಾವನೆ ಸಿದ್ಧವಾಗಿದೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಬುಧವಾರ ಸಂಜೆ ಸಚಿವ ಸಂಪುಟ ಸಭೆ ನಡೆಯಲಿದೆ. ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಸರ್ಕಾರಿ ಕಚೇರಿಗಳ ಸ್ಥಳಾಂತರದ ಬಗ್ಗೆ ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ.
ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ ವಿಶೇಷ ಮುತುವರ್ಜಿ: ಮುಖ್ಯಮಂತ್ರಿ ಭರವಸೆ
ರಾಜ್ಯ ಮಾನವ ಹಕ್ಕುಗಳ ಆಯೋಗದ ಒಬ್ಬ ಸದಸ್ಯರು ಉತ್ತರ ಕರ್ನಾಟಕ ಭಾಗದಿಂದ ಕೆಲಸ ಮಾಡಲು ಪ್ರಸ್ತಾವನೆ ಸಿದ್ದಗೊಳಿಸಲಾಗಿದೆ. ರಾಜ್ಯ ಮಾಹಿತಿ ಆಯುಕ್ತರು ಒಬ್ಬರು ಬೆಳಗಾವಿಯಿಂದ ಮತ್ತೊಬ್ಬರು ಕಲಬುರಗಿಯಿಂದ ಕೆಲಸ ಮಾಡಲು ನಿರ್ಧರಿಸಲಾಗಿದೆ.
ಒಡಕಿಗೆ ಓಗೊಡದ ಉತ್ತರ ಕರ್ನಾಟಕ ಜನತೆ : ಸಿಎಂ ಕೃತಜ್ಞತೆ
ಯಾವ-ಯಾವ
ಕಚೇರಿಗಳು
*
ಕೃಷ್ಣ
ಭಾಗ್ಯ
ಜಲ
ನಿಗಮ
ಲಿಮಿಟೆಡ್
(ಬೆಂಗಳೂರು)
*
ಕರ್ನಾಟಕ
ನೀರಾವರಿ
ನಿಗಮ
ಲಿಮಿಟೆಡ್
(ಬೆಂಗಳೂರು)
*
ಕರ್ನಾಟಕ
ರಾಜ್ಯ
ಜವಳಿ
ಮೂಲಸೌಲಭ್ಯ
ಅಭಿವೃದ್ಧಿ
ನಿಗಮ
ನಿಯಮಿತ
(ಬೆಂಗಳೂರು)
*
ಪುರಾತತ್ವ
ಇಲಾಖೆ
ಮ್ಯೂಸಿಯಂ
ಮತ್ತು
ಹೆರಿಟೇಜ್
(ಮೈಸೂರು)
*
ಕರ್ನಾಟಕ
ಗ್ರಾಮೀಣ
ನೀರು
ಸರಬರಾಜು
ಮತ್ತು
ಒಳಚರಮಡಿ
ಮಂಡಳಿ
(ಉತ್ತರ
ಕರ್ನಾಟಕ
ಪ್ರತ್ಯೇಕ)
ಉತ್ತರ ಕರ್ನಾಟಕ ಅಭಿವೃದ್ಧಿಗೆ ಬದ್ಧ, ಎಚ್ಡಿಕೆ ಮಹತ್ವದ ನಡೆ
ಜುಲೈನಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂಬ ಬೇಡಿಕೆ ಮುಂದಿಡಲಾಗಿತ್ತು. ಆಗ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕಕ್ಕೆ ಹಲವು ಸರ್ಕಾರಿ ಕಚೇರಿಗಳ ಸ್ಥಳಾಂತರ ಮಾಡುವುದಾಗಿ ಭರವಸೆ ನೀಡಿದ್ದರು.