ಬೆಳಗಾವಿ: ಕಿತ್ತೂರು ಉತ್ಸವಕ್ಕೆ ಸಂಭ್ರಮದ ಚಾಲನೆ
ಬೆಳಗಾವಿ, ಅಕ್ಟೋಬರ್ 23: ಕಿತ್ತೂರು ಉತ್ಸವದ ಅಂಗವಾಗಿ ಬೆಳಗಾವಿ ಜಿಲ್ಲೆಯಾದ್ಯಂತ ಸಂಚರಿಸಿದ ವೀರಜ್ಯೋತಿಯನ್ನು ಕಿತ್ತೂರು ಮಹಾದ್ವಾರದ ಬಳಿ ಭಾನುವಾರದಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಬರಮಾಡಿಕೊಂಡರು.
ಕಿತ್ತೂರು
ಚೆನ್ನಮ್ಮ
ಪುತ್ಥಳಿಗೆ
ಮಾಲಾರ್ಪಣೆ
ಮಾಡಿ
ಉತ್ಸವಕ್ಕೆ
ಚಾಲನೆ
ನೀಡಿದರು.
ಇದಕ್ಕೂ
ಮುನ್ನ
ಬೆಳಗಾವಿಯಿಂದ
6
ಕಿ.ಮೀ
ದೂರದಲ್ಲಿರುವ
ಕಾಕತಿಯಲ್ಲಿ
ರಾಣಿ
ಚೆನ್ನಮ್ಮ
ಮೂರ್ತಿಗೆ
ರಮೇಶ್
ಜಾರಕಿಹೊಳಿ
ಅವರು
ಮಾಲಾರ್ಪಣೆ
ಮಾಡಿ
ಪೂಜೆ
ಸಲ್ಲಿಸಿದರು.
ನಂತರ ಕಿತ್ತೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರಾದ ರಮೇಶ ಜಾರಕಿಹೊಳಿ, ಕಂದಾಯ ಇಲಾಖೆಯ ಸಂಸದೀಯ ಕಾರ್ಯರ್ಶಿ ಗಣೇಶ ಹುಕ್ಕೇರಿ, ಮುಖ್ಯ ಸಚೇತಕ ಅಶೋಕ ಪಟ್ಟಣ, ಜಿಪಂ ಅಧ್ಯಕ್ಷರಾದ ಆಶಾ ಐಹೊಳೆ, ಶಾಸಕರಾದ ಡಿ.ಬಿ.ಇನಾಂದಾರ್, ವಿ.ಐ.ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.
ಅಕ್ಟೋಬರ್ 23ರಿಂದ ಮುರು ದಿನಗಳ ಕಾಲ ಉತ್ಸವ ನಡೆಯಲಿದೆ. ಉತ್ಸವದ ಅಂಗವಾಗಿ ಬೆಳಗಾವಿ ಜಿಲ್ಲೆಯಾದ್ಯಂತ ವೀರಜ್ಯೋತಿ ಸಂಚರಿಸಿತ್ತು. ಭಾನುವಾರ ಸಂಜೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ.
ಬ್ರಿಟಿಷರ
ವಿರುದ್ಧ
ಹೋರಾಟ
ನಡೆಸಿದ
ಮೊದಲ
ಮಹಿಳಾ
ಸ್ವಾತಂತ್ರ್ಯ
ಹೋರಾಟಗಾರ್ತಿ
ವೀರ
ರಾಣಿ
ಚೆನ್ನಮ್ಮ
ಅವರು
ಅಕ್ಟೋಬರ್
23,
1824ರಂದು
ತೋರಿದ
ಪರಾಕ್ರಮದ
ನೆನಪಿಗಾಗಿ
ಪ್ರತಿ
ವರ್ಷ
ಕಿತ್ತೂರು
ಉತ್ಸವವನ್ನು
ವಿಜಯೋತ್ಸವವಾಗಿ
ಕರ್ನಾಟಕ
ಸರ್ಕಾರ
ಆಚರಿಸುತ್ತಾ
ಬಂದಿದೆ.
ಮೆರವಣಿಗೆಯಲ್ಲಿ ನಾಡಿನ ಕಲೆ-ಸಾಂಸ್ಕೃತಿಕ ಪರಂಪರೆ ಬಿಂಬಿಸಿದ ಕಲಾ ತಂಡಗಳು..