ಐಐಟಿ ಸ್ಥಾಪನೆಗೆ ಬೆಳಗಾವಿ ಉತ್ತಮ ಸ್ಥಳ
ಬೆಳಗಾವಿ, ಮಾ.6 : ಕೇಂದ್ರ ಸರ್ಕಾರ ಬಜೆಟ್ನಲ್ಲಿ ಕರ್ನಾಟಕದಲ್ಲಿ ಐಐಟಿ ಸ್ಥಾಪಿಸಲಾಗುವುದು ಎಂದು ಘೋಷಣೆ ಮಾಡುತ್ತಿದ್ದಂತೆ ಯಾವ ಜಿಲ್ಲೆಗೆ ಐಐಟಿ ಬರಬೇಕು ಎಂಬ ಚರ್ಚೆ ತಾರಕಕ್ಕೇರಿದೆ. ಬೆಳಗಾವಿಯಲ್ಲಿ ಐಐಟಿ ಸ್ಥಾಪಿಸುವಂತೆ ಸಂಸದ ಸುರೇಶ ಅಂಗಡಿ ಸಚಿವೆ ಸ್ಮೃತಿ ಇರಾನಿ ಅವರಿಗೆ ಮನವಿ ಮಾಡಿದ್ದಾರೆ.
ಬೆಳಗಾವಿ
ಸಂಸದ
ಸುರೇಶ
ಅಂಗಡಿ
ಅವರು
ಗುರುವಾರ
ಕೇಂದ್ರ
ಮಾನವ
ಸಂಪನ್ಮೂಲ
ಖಾತೆ
ಸಚಿವೆ
ಸ್ಮೃತಿ
ಇರಾನಿ
ಅವರನ್ನು
ಭೇಟಿ
ಮಾಡಿ
ರಾಜ್ಯಕ್ಕೆ
ಘೋಷಣೆಯಾಗಿರುವ
'ಭಾರತೀಯ
ತಂತ್ರಜ್ಞಾನ
ಸಂಸ್ಥೆ'
(ಐಐಟಿ)ಯನ್ನು
ಬೆಳಗಾವಿಯಲ್ಲಿ
ಸ್ಥಾಪಿಸಬೇಕು
ಎಂದು
ಮನವಿ
ಸಲ್ಲಿಸಿದರು.
ಬಿಜೆಪಿ
ರಾಜ್ಯಾಧ್ಯಕ್ಷ
ಪ್ರಹ್ಲಾದ್
ಜೋಶಿ
ಈ
ಸಂದರ್ಭದಲ್ಲಿ
ಉಪಸ್ಥಿತರಿದ್ದರು.
[ಐಐಟಿ
ಎಲ್ಲಿ
ಸ್ಥಾಪನೆ
ಆಗಬೇಕು?
ಪ್ರಶ್ನೆಗೆ
ಉತ್ತರ
ಸಿಕ್ಕಿದೆ!]
ಬೆಳಗಾವಿಯಲ್ಲಿ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಉತ್ತಮ ಸಾರಿಗೆ ವ್ಯವಸ್ಥೆ ಇದೆ. ಬೆಳಗಾವಿ ಹಾಗೂ ಧಾರವಾಡ ನಗರಗಳ ಮಧ್ಯದ ಕಿತ್ತೂರಿನಲ್ಲಿ ಐಐಟಿ ಸ್ಥಾಪನೆಗೆ ಬೇಕಾದ ಭೂಮಿ ಇದೆ. ಆದ್ದರಿಂದ, ಜಿಲ್ಲೆಯಲ್ಲಿ ಸ್ಥಾಪಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ. [ಐಐಟಿ ಎಲ್ಲಿ ಸ್ಥಾಪನೆಯಾಗಬೇಕು ಮತ ಹಾಕಿ]
ಮಾರ್ಚ್ 7ರಂದು ಪಕ್ಷಾತೀತ ಸಭೆ : ಬೆಳಗಾವಿಯಲ್ಲಿ ಐಐಟಿ ಸ್ಥಾಪನೆಯಾಗಬೇಕು ಎಂದು ಒತ್ತಾಯಿಸಲು ಜಿಲ್ಲೆಯ ವಿವಿಧ ಪ್ರಗತಿಪರ ಸಂಘಟನೆಗಳು ತೀರ್ಮಾನಕೈಗೊಂಡಿವೆ. ಮಾ.7ರಂದು ವಿವಿಧ ಪ್ರಗತಿಪರ ಸಂಘಟನೆಗಳು ಪಕ್ಷಾತೀತವಾಗಿ ಸಭೆ ಸೇರಿ ಈ ಬಗ್ಗೆ ಚರ್ಚೆ ನಡೆಸಲಿವೆ.
ಧಾರವಾಡದಲ್ಲಿ ಐಐಟಿ : ಕರ್ನಾಟಕದಲ್ಲಿ ಐಐಟಿ ಎಲ್ಲಿ ಸ್ಥಾಪನೆಯಾಗಬೇಕು? ಎಂಬ ಚರ್ಚೆ ಆರಂಭವಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲೂ ಈ ಬಗ್ಗೆ ದಿನ ಬೆಳಗಾದರೆ ಚರ್ಚೆ ನಡೆಯತ್ತಿದೆ. ಒನ್ ಇಂಡಿಯಾ ಕನ್ನಡದ ಓದುಗರು ಧಾರವಾಡದಲ್ಲಿ ಐಐಟಿ ಸ್ಥಾಪನೆಯಾಗಬೇಕು ಎಂದು ಹೇಳಿದ್ದಾರೆ.