ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈ ಬಾರಿ ಮೋದಿ ಅಲೆ ಇಲ್ಲ: ಸತೀಶ್ ಜಾರಕಿಹೊಳಿ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಮಾರ್ಚ್ 24:ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಾ.ಸಾಧುನವರ ಹೆಸರು ಘೋಷಣೆಯಾಗಿದೆ. ನಮ್ಮ ಕೆಲಸ ಮಾಡಿದ್ದೇವೆ, ಇನ್ನು ಅಭ್ಯರ್ಥಿಗಳ ಮೇಲೆ ಹೆಚ್ಚಿನ ಕೆಲಸವಿದೆ ಎಂದು ಬೆಳಗಾವಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಬೆಳಗಾವಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಬಾರಿ ಯಾವುದೇ ಮೋದಿ ಅಲೆ ಇಲ್ಲ.ಕಳೆದ ಬಾರಿ ನೀಡಿದ ವಾಗ್ದಾನಗಳನ್ನು ಮೋದಿ ಈಡೇರಿಸಿಲ್ಲ. ಹೀಗಾಗಿ ನಮಗೆ ಹೆಚ್ಚಿನ ಅನುಕೂಲವಿದೆ. ಕಳೆದ ಬಾರಿ ಚಿಕ್ಕೋಡಿ ಗೆದ್ದು, ಬೆಳಗಾವಿ ಕಳೆದುಕೊಂಡಿದ್ವಿ. ಆದರೆ ಈ ಬಾರಿ ಚಿಕ್ಕೋಡಿ ಉಳಿಸಿಕೊಳ್ಳುವ ಜೊತೆಗೆ ಬೆಳಗಾವಿ ಲೋಕಸಭೆ ಗೆಲ್ಲುವ ಪ್ರಯತ್ನ ಮಾಡಲಾಗುವುದು ಎಂದರು.

ತುಮಕೂರಿನಲ್ಲಿ ಸುಸೂತ್ರವಿಲ್ಲ ಕಣ; ಒಬ್ಬರನ್ನು ಕೆಡವಲು ಮತ್ತೊಬ್ಬರು ಪಣ!ತುಮಕೂರಿನಲ್ಲಿ ಸುಸೂತ್ರವಿಲ್ಲ ಕಣ; ಒಬ್ಬರನ್ನು ಕೆಡವಲು ಮತ್ತೊಬ್ಬರು ಪಣ!

ಬಿಜೆಪಿಯವರು ಕೇವಲ ಕಾಶ್ಮೀರ ವಿಚಾರ ಇಟ್ಟುಕೊಂಡು ಚುನಾವಣೆ ಮಾಡುತ್ತಿದ್ದಾರೆ. ಯಾವುದೇ ಅಭಿವೃದ್ಧಿ ವಿಚಾರಗಳಿಲ್ಲ ಎಂದು ಲೇವಡಿ ಮಾಡಿದ ಸತೀಶ್ ಜಾರಕಿಹೊಳಿ, ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಸುರೇಶ ಅಂಗಡಿ ಕೊಡುಗೆ ಶೂನ್ಯ. ಕನಿಷ್ಠ ಸೌಜನ್ಯಕ್ಕಾದ್ರು ಅವರು ಕ್ಷೇತ್ರದಲ್ಲಿ ಸುತ್ತಾಡಬೇಕಿತ್ತು. ಚಿಕ್ಕೋಡಿಯ ಪ್ರಕಾಶ ಹುಕ್ಕೇರಿಯವರಿಗೆ ಹೋಲಿಕೆ ಮಾಡಿದರೆ ಮೂರು ಬಾರಿ ಗೆದ್ದಿರುವ ಸುರೇಶ ಅಂಗಡಿ ಸಾಧನೆ ಶೂನ್ಯ ಎಂದು ಆರೋಪಿಸಿದರು.

Satish Jarkiholi talked about the Lok Sabha election 2019

ಮೋದಿ ನೋಡಿ, ಬಿಜೆಪಿ ನೋಡಿ ವೋಟ್ ಹಾಕೋವ್ರು ಇದ್ದಾರೆ. ಆದ್ರೆ ಅದು ಗೆಲ್ಲಿಸುವಷ್ಟು ವರ್ಕೌಟ್ ಆಗಲ್ಲ.ಮೋದಿಯನ್ನ ಕಳೆದ ಬಾರಿ ಜನ ನೋಡಿ ಆಗಿದೆ. ಎರಡನೇ ಬಾರಿ ನೋಡುವ ಅವಶ್ಯಕತೆ ಇಲ್ಲ. ಮೋದಿ ಏನಾದ್ರು ದೊಡ್ಡ ಸಾಧನೆ ಮಾಡಿದ್ರೆ ಜನ ವೋಟ್ ಮಾಡ್ತಿದ್ರು ಎಂದು ಜಾರಕಿಹೊಳಿ ತಿಳಿಸಿದರು.

 ಸೋಮವಾರ ನಾಮಪತ್ರ ಸಲ್ಲಿಸುವ ವಿವಿಧ ಪಕ್ಷದ ಅಭ್ಯರ್ಥಿಗಳ ಪಟ್ಟಿ ಸೋಮವಾರ ನಾಮಪತ್ರ ಸಲ್ಲಿಸುವ ವಿವಿಧ ಪಕ್ಷದ ಅಭ್ಯರ್ಥಿಗಳ ಪಟ್ಟಿ

ರಮೇಶ ಜಾರಕಿಹೊಳಿ ಪಕ್ಷದಲ್ಲಿದ್ದಾರೆ. ಅವರು ಕೆಲಸ ಮಾಡ್ತಾರೆ. ಅವರನ್ನು ಭೇಟಿಯಾಗಲು ಇದುವರೆಗೆ ಸಾಧ್ಯವಾಗಿಲ್ಲ. ಅವರ ಕಾರ್ಯಕರ್ತರು ನಮ್ಮ ಸಂಪರ್ಕದಲ್ಲಿದ್ದಾರೆ.

 ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಯುವ ಅಭ್ಯರ್ಥಿಗಳ ಜಿದ್ದಾಜಿದ್ದಿಗೆ ಅಖಾಡ ಸಿದ್ಧ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಯುವ ಅಭ್ಯರ್ಥಿಗಳ ಜಿದ್ದಾಜಿದ್ದಿಗೆ ಅಖಾಡ ಸಿದ್ಧ

ಬೆಳಗಾವಿ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಇಬ್ಬರು ಹೆಸರನ್ನು ಶಿಫಾರಸ್ಸು ಮಾಡಲಾಗಿತ್ತು. ಅದರಲ್ಲಿ ಒಬ್ಬರಿಗೆ ಟಿಕೆಟ್ ಸಿಕ್ಕಿದೆ. ಟಿಕೆಟ್ ವಂಚಿತ ಸಿದ್ನಾಳ ಅವರಿಗೆ ಇನ್ನು ವಯ್ಯಸ್ಸಿದೆ. ಅವರು ಇನ್ನು ಪ್ರಾರಂಭಿಕ ಹಂತದಲ್ಲಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

English summary
Satish Jarkiholi talked about the Lok Sabha election 2019.He said that there is no Modi wave in this time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X