ಬೆಳಗಾವಿಯಲ್ಲಿ ಧರ್ಮ ಪ್ರಚಾರ: ಎಫ್ಐಆರ್ ದಾಖಲು
ಬೆಳಗಾವಿ, ಎಪ್ರಿಲ್ 06: ಟೂರಿಸ್ಟ್ ವೀಸಾ ಪಡೆದು ಬೆಳಗಾವಿಯಲ್ಲಿ ಧರ್ಮ ಪ್ರಚಾರ ನಡೆಸಿದ ಇಂಡೋನೇಶಿಯಾ ಮೂಲದ ಹತ್ತು ಜನರ ಮೇಲೆ ಪ್ರತ್ಯೇಕವಾಗಿ ಎಫ್ಐಆರ್ ದಾಖಲು ಮಾಡಲಾಗಿದೆ.
ಇಂಡೋನೇಶಿಯಾ ಮೂಲದ ಹತ್ತು ಜನ ಟೂರಿಸ್ಟ್ ವೀಸಾ ಪಡೆದು, ದೆಹಲಿಯ ಧರ್ಮ ಸಭೆಯಲ್ಲಿ ಭಾಗವಹಿಸಿ ಬೆಳಗಾವಿಗೆ ಬಂದಿದ್ದರು. ಕಾನೂನಿನ ಪ್ರಕಾರ ಅವರು ಮಿಷನರಿ ವೀಸಾ ಪಡೆಯಬೇಕಾಗಿತ್ತು. ಆದರೆ ಟೂರಿಸ್ಟ್ ವೀಸಾ ಪಡೆದು ಧರ್ಮ ಪ್ರಚಾರ ನಡೆಸಿದ ಆರೋಪದ ಮೇಲೆ ಹತ್ತೂ ಜನರ ಮೇಲೆ ಮಾಳ ಮಾರುತಿ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ .
ನಿಜಾಮುದ್ದೀನ್ ಸಭೆಗೆ ಅನುಮತಿ ಯಾರು ನೀಡಿದ್ದರು?: ಶರದ್ ಪವಾರ್ ಪ್ರಶ್ನೆ
ಈ ಹತ್ತು ಜನರು ಈಗ ಹೋಮ್ ಕ್ವಾರಂಟೈನಲ್ಲಿದ್ದು ಅವರ ಕ್ವಾರಂಟೈನ್ ಅವಧಿ ಮುಗಿದ ಬಳಿಕ ಮುಂದಿನ ಪ್ರಕ್ರಿಯೆ ನಡೆಯುವ ಸಾದ್ಯತೆ ಇದೆ.
ವೀಸಾ ಪಡೆದುಕೊಳ್ಳುವ ವಿಷಯದಲ್ಲಿ ಇಂಡೋನೇಶಿಯಾ ಮೂಲದ ಹತ್ತು ಜನ ಕಾನೂನು ಉಲ್ಲಂಘಿಸಿದ ಆರೋಪದ ಮೇಲೆ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
Comments
English summary
FIR has been lodged on ten Indonesian people who obtained a tourist visa and promoted religion in Belagavi.