ಭರ್ತಿ ಹಂತಕ್ಕೆ ನವಿಲು ತೀರ್ಥ ಜಲಾಶಯ; 10 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ
ಬೆಳಗಾವಿ, ಆಗಸ್ಟ್ 16: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕುಂಭದ್ರೋಣ ಮಳೆ ಹಿನ್ನೆಲೆಯಲ್ಲಿ ಮಲಪ್ರಭಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುನವಳ್ಳಿ ಬಳಿಯ ನವಿಲು ತೀರ್ಥ ಜಲಾಶಯದಿಂದ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.
ರಾಮದುರ್ಗ ತಾಲೂಕಿನ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹದ ಅತಂಕ ಎದುರಾಗಿದ್ದು, ನದಿ ತೀರಕ್ಕೆ ತೆರಳದಂತೆ ಡಂಗೂರ ಸಾರಿ ನದಿ ತೀರದ ಗ್ರಾಮಸ್ಥರಿಗೆ ಮಾಹಿತಿ ನೀಡಲಾಗುತ್ತಿದೆ. ಮಲಪ್ರಭಾ ನದಿಗೆ ಅಡ್ಡಲಾಗಿ ಕಟ್ಟಲಾದ ಸುರೇಬಾನ-ರಾಮದುರ್ಗ ಸಂಪರ್ಕಿಸುವ ಸೇತುವೆ ಜಲಾವೃತಗೊಂಡಿದೆ. ಹೀಗಾಗಿ ಬೇರೆ ಮಾರ್ಗವಾಗಿ ಜನರು ತೆರಳುತ್ತಿದ್ದಾರೆ.
ಕೊಯ್ನಾ ಜಲಾನಯನ ಪ್ರದೇಶದಲ್ಲಿ ಲಘು ಭೂಕಂಪ; ಕೃಷ್ಣಾ ನದಿ ತೀರದಲ್ಲಿ ಆತಂಕ
"ಮಹಾ'
ಮಳೆಯಿಂದ
1
ಲಕ್ಷ
ಕ್ಯೂಸೆಕ್ಸ್
ದಾಟಿದ
ಕೃಷ್ಣಾ
ಒಳಹರಿವು
ಮಹಾರಾಷ್ಟ್ರದಲ್ಲಿ
ಬಿಟ್ಟು
ಬಿಡದೇ
ಸುರಿಯುತ್ತಿರುವ
ಭಾರೀ
ಮಳೆಯಿಂದ
ಕೊಯ್ನಾ,
ವಾರಣಾ
ಜಲಾಶಯದಲ್ಲಿ
ನೀರಿನ
ಒಳಹರಿವು
ಹೆಚ್ಚಾಗಿದೆ.
ಹೀಗಾಗಿ
ಕೊಯ್ನಾ
ಜಲಾಶಯದಿಂದ
ನೀರು
ಬಿಡುಗಡೆ
ಮಾಡಲಾಗುತ್ತಿದ್ದು,
ಕೃಷ್ಣಾನದಿ
ತೀರದಲ್ಲಿ
ಪ್ರವಾಹದ
ಭೀತಿ
ಎದುರಾಗಿದೆ.
ಮಳೆಯಿಂದ ಕೊಯ್ನಾ ಜಲಾಶಯ ಭರ್ತಿ ಹಂತ ತಲುಪುತ್ತಿದ್ದು, ಇಂದು ಮಧ್ಯಾಹ್ನ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ 50 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುವ ಸಾಧ್ಯತೆ ಇದೆ.
ಬೆಳಗಾವಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಕೃಷ್ಣೆಗೆ ಪ್ರವಾಹ ಭೀತಿ
ಮಹಾರಾಷ್ಟ್ರದಲಿ ಮಳೆ ಹೆಚ್ಚುತ್ತಿರುವ ಕಾರಣ ಕೃಷ್ಣಾ ನದಿಯ ಒಳಹರಿವು ಒಂದು ಲಕ್ಷ ಕ್ಯೂಸೆಕ್ಸ್ ದಾಟಿದೆ. ನಾಳೆ ಕೃಷ್ಣಾ ನದಿಯ ಒಳಹರಿವು ಎರಡು ಲಕ್ಷ ದಾಟುವ ಸಾಧ್ಯತೆ ಇದೆ. ಕೃಷ್ಣಾ ತೀರದಲ್ಲಿ ಪ್ರವಾಹದ ಪರಿಸ್ಥಿತಿ ಎದುರಾಗುವ ಸಾಧ್ಯತೆ ಹೆಚ್ಚಿದೆ.
ಕರ್ನಾಟಕದ ನೀರಾವರಿ ಇಲಾಖೆಯ ಅಧಿಕಾರಿಗಳು ಮಹಾರಾಷ್ಟ್ರದ ನೀರಾವರಿ ಇಲಾಖೆಯ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ. ಪ್ರವಾಹ ಪರಿಸ್ಥಿತಿಯ ಮೇಲೆ ಇಲ್ಲಿನ ಅಧಿಕಾರಿಗಳು ನಿಗಾ ವಹಿಸಿದ್ದಾರೆ.