ಫೇಸ್ಬುಕ್ನಲ್ಲಿ ಶ್ರೀಮಂತ್ ಪಾಟೀಲ್ ಕಾಲೆಳೆದ ರಾಜು ಕಾಗೆ
ಬೆಳಗಾವಿ, ನವೆಂಬರ್ 17: ಉಪ ಚುನಾವಣೆ ಕಣ ರಂಗೇರುತ್ತಿದೆ. ಸ್ಪರ್ಧಿ ಪ್ರತಿಸ್ಪರ್ಧಿಗಳ ಕಾಲೆಳೆತ ಮುಂದುವರೆದಿದೆ.
ಮಾಜಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಫೇಸ್ಬುಕ್ ನಲ್ಲಿ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಶ್ರೀಮಂತ್ ಪಾಟೀಲ್ ಅವರಿಗೆ ಟಾಂಗ್ ನೀಡಿದ್ದಾರೆ. ನಾನು ಅನರ್ಹ ಅಭ್ಯರ್ಥಿ ಅಲ್ಲ. ಅರ್ಹ ಅಭ್ಯರ್ಥಿ ಅಂತಾ ರಾಜು ಕಾಗೆ ಪೋಸ್ಟ್ ಮಾಡಿದ್ದಾರೆ.
ನಾಳೆ ನಾಮಪತ್ರ ಸಲ್ಲಿಸುವ ವೇಳೆ ಭಾಗಿಯಾಗಲು ಫೇಸ್ಬುಕ್ ಮುಖಾಂತರ ಕಾರ್ಯಕರ್ತರಿಗೆ ರಾಜು ಕಾಗೆ ಆಹ್ವಾನ ನೀಡಿದ್ದಾರೆ. ಶಾಸಕರ ಅನರ್ಹ ಪದವನ್ನೇ ಟೀಕಾಸ್ತ್ರ ವನ್ನಾಗಿ ಮಾಡಿಕೊಂಡು ಮಾಜಿ ಶಾಸಕ ರಾಜು ಕಾಗೆ ಮಾತನಾಡಿದ್ದಾರೆ. ನಾನು ಅನರ್ಹ ಅಭ್ಯರ್ಥಿ ಅಲ್ಲ , ಅರ್ಹ ಅಭ್ಯರ್ಥಿ ಎಂದು ಪೋಸ್ಟ್ ಮಾಡಿದ್ದಾರೆ.
ಸೋಮವಾರ ರಾಜು ಕಾಗೆ ನಾಮಪತ್ರ ಸಲ್ಲಿಸಲಿದ್ದಾರೆ. ಕಾಂಗ್ರೆಸ್ ಎರಡನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
Comments
English summary
The by-election arena is taking place. The agony of competing competitors continues.
Story first published: Sunday, November 17, 2019, 12:10 [IST]