ಮಳೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್ ಐ ಸಾವು
ಬೆಳಗಾವಿ, ಆಗಸ್ಟ್ 6: ಜಿಲ್ಲೆಯಲ್ಲಿ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಜಲಾವೃತವಾಗಿದ್ದು, ಅಲ್ಲಿ ವಾಹನ ಸಂಚಾರ ನಿರ್ವಹಿಸುತ್ತಿದ್ದ ಪಿಎಸ್ಐ ಗೆ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ಕಾರವಾರವನ್ನೂ ಬಿಡುತ್ತಿಲ್ಲ ಮಳೆ, ತೆರೆದುಕೊಂಡಿವೆ ಗಂಜಿ ಕೇಂದ್ರಗಳು
ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಎಂ.ಕೆ ಹುಬ್ಬಳ್ಳಿ ಬಳಿ ಈ ದುರ್ಘಟನೆ ಸಂಭವಿಸಿದೆ.
ಮಲಪ್ರಭಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಆ ನೀರು ರಾಷ್ಟ್ರೀಯ ಹೆದ್ದಾರಿ ಮೇಲೂ ಹರಿದುಬಂದಿತ್ತು. ಆ ವೇಳೆ ಸ್ಥಳದಲ್ಲಿ ವಾಹನ ಸಂಚಾರದ ನಿಗಾ ವಹಿಸಿದ್ದರು ಪಿಎಸ್ ಐ ಈರಣ್ಣ ಲಟ್ಟಿ. ಇದೇ ಸಮಯದಲ್ಲಿ ಕಾರೊಂದು ರಭಸವಾಗಿ ಬಂದು ಡಿಕ್ಕಿ ಹೊಡೆದಿತ್ತು. ಸ್ಥಳದಲ್ಲಿಯೇ ಅವರು ಸಾವನ್ನಪ್ಪಿದ್ದಾರೆ.
ಎಲ್ಲೆಲ್ಲೂ ಮಳೆಯೋ ಮಳೆ, ಆದ್ರೆ ಇಲ್ಲಿ ಕಥೆ ಕೇಳೋರೇ ಇಲ್ಲ...
ಈರಣ್ಣಾ ಲಟ್ಟಿ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿದ್ದರು.
Comments
English summary
Due to rain in the district, the National Highway was covered with water. at that time, psi, who was managing vehicle on road hit by a car and died on the spot.
Story first published: Tuesday, August 6, 2019, 17:51 [IST]