ಮೇ 25ರ ನಂತರ ಹಲವರ ಸಚಿವ ಸ್ಥಾನ ಹೋಗುತ್ತದೆ: ರಮೇಶ್ ಜಾರಕಿಹೊಳಿ
Recommended Video
ಬೆಳಗಾವಿ, ಮೇ 02: ಬಂಡಾಯದ ಬೆಂಕಿಯಲ್ಲಿ ಕುದಿಯುತ್ತಿರುವ ಶಾಸಕ ರಮೇಶ್ ಜಾರಕಿಹೊಳಿ ಅವರು ಪದೇ-ಪದೇ ಬಂಡಾಯದ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಆದರೆ ಯಾವುದೇ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ವಿಫಲರಾಗುತ್ತಿದ್ದಾರೆ.
ರಾಜ್ಯದ ಎರಡನೇ ಹಂತದ ಮತದಾನದ ದಿನ (ಏಪ್ರಿಲ್ 23) ರಂದು ಸುದ್ದಿಗಾರರೊಂದಿಗೆ ಮಾತನಾಡಿದ್ದ ರಮೇಶ್ ಜಾರಕಿಹೊಳಿ, ಕಾಂಗ್ರೆಸ್ ಶೀಘ್ರದಲ್ಲಿಯೇ ರಾಜೀನಾಮೆ ನೀಡುತ್ತೇನೆ ಎಂದಿದ್ದರು, ಆದರೆ ಆ ನಂತರ ಯಾಕೋ ಮೃದುವಾಗಿಬಿಟ್ಟರು.
ರಮೇಶ್ ಜಾರಕಿಹೊಳಿ, ಶಾಸಕ ಮಹೇಶ್ ಕುಮಟಳ್ಳಿ ಮಾತುಕತೆ: ಆಪರೇಷನ್ ಕಮಲ?
ಆದರೆ ಈಗ ಮತ್ತೆ ಮೈತ್ರಿ ಸರ್ಕಾರದ ಮೇಲೆ ಬೆಂಕಿಯುಗುಳಿರುವ ರಮೇರ್ಶ ಜಾರಕಿಹೊಳಿ ಅವರು, ಮೇ 25ರ ಬಳಿಕ ಸಚಿವರೆರಂದು ಠೀವಿಯಲ್ಲಿ ತಿರುಗಾಡುತ್ತಿರುವ ಕೆಲವರು ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ರಮೇರ್ಶ ಜಾರಕಿಹೊಳಿ ಅವರು ತಮ್ಮ ಸಹೋದರ ಸತೀಶ್ ಅವರನ್ನು ಉದ್ದೇಶವಾಗಿಟ್ಟುಕೊಂಡೆ ಈ ಮಾತು ಹೇಳಿದ್ದಾರೆ ಎನ್ನಲಾಗಿದೆ.
ಸರ್ಕಾರ ಉರುಳಿಸುವ ಮ್ಯಾಜಿಕ್ ನಂಬರ್ ರಮೇಶ್ ಜಾರಕಿಹೊಳಿ ಬಳಿ ಇಲ್ಲ!
ಮುಂದುವರೆದು ಮಾತನಾಡಿರುವ ಅವರು, ಕೆಂಪು ದೀಪಕ್ಕೆ ಯಾರೂ ಹೆದರುವ ಅವಶ್ಯಕತೆ ಇಲ್ಲ. ವಿಶ್ವಾಸ ದ್ರೋಹಿ, ಬೆನ್ನಿಗೆ ಚೂರಿ ಹಾಕೋವರನ್ನು ನಂಬಬೇಡಿ, ಮೇ 25 ರ ಬಳಿಕ ರಾಜ್ಯದಲ್ಲಿ ರಾಜಕೀಯ ಧೃವೀಕರಣ ಆಗಲಿದೆ ಎಂದಿದ್ದಾರೆ.
ಮೌನಕ್ಕೆ ಶರಣಾದ ರಮೇಶ್ ಜಾರಕಿಹೊಳಿ, ವಿದೇಶ ಪ್ರವಾಸ?
ಬೆಳಗಾವಿಯಲ್ಲಿ ರಾಜಕಾರಣ ರಂಗೇರಿದ್ದು, ಜಾರಕಿಹೊಳಿ ಸಹೋದರರ ನಡುವೆ ದ್ವೇಷ ರಾಜಕಾರಣ ನಡೆಯುತ್ತಿದೆ. ರಮೇಶ್ ಜಾರಕಿಹೊಳಿ ಮತ್ತು ಸತೀಶ್ ಜಾರಕಿಹೊಳಿ ಪರಸ್ಪರ ಎದುರುಬದುರಾಗಿದ್ದು, ಪರಸ್ಪರ ವಾಗ್ದಾಳಿಗಳು ನಡೆಯುತ್ತಲೇ ಇವೆ.