ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ ಮೇಲೆ ಕಲ್ಲೆಸೆತ
ಬೆಳಗಾವಿ, ಅಕ್ಟೋಬರ್ 17: ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ ಮೇಲೆ ಕಲ್ಲು ತೂರಾಟವಾಗಿದೆ. ಮಹಾರಾಷ್ಟ್ರದ ಕೊಲ್ಲಾಪುರ ಬಳಿಯ ಕುಗನೊಳ್ಳಿ ಬಳಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ಎಸೆದು ತಡೆಯೊಡ್ಡಿರುವ ಘಟನೆ ಮಂಗಳವಾರ ಮುಂಜಾನೆ ಸಂಭವಿಸಿದೆ.
ಬಳ್ಳಾರಿ
-ಪೂನಾ
ಮಾರ್ಗದ
ಬಸ್
ಮೇಲೆ
ಕಲ್ಲು
ತೂರಾಟ,
ಬಸ್
ನ
ಗಾಜುಗಳು
ಪುಡಿ-ಪುಡಿಯಾದ
ಹಿನ್ನಲೆಯಲ್ಲಿ
ಮಹಾರಾಷ್ಟ್ರಕ್ಕೆ
ಕರ್ನಾಟಕದಿಂದ
ಬಸ್
ಸಂಚಾರವನ್ನು
ತಾತ್ಕಾಲಿಕವಾಗಿ
ಸ್ಥಗಿತಗೊಳಿಸಲಾಗಿದೆ
ಎಂದು
ಕೆಎಸ್ಸಾರ್ಟಿಸಿ
ಬೆಳಗಾವಿ
ವಿಭಾಗದ
ಮುಖ್ಯಸ್ಥ
ಎಸ್.
ಆರ್
ಉಮಾಶಂಕರ್
ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಎಂ.ಎಸ್.ಆರ್.ಟಿ.ಸಿ ನೌಕರರ ಪ್ರತಿಭಟನೆ ನಡೆಯುತ್ತಿರುವ ಹಿನ್ನಲೆಯಲ್ಲಿ ಗಡಿಭಾಗದಲ್ಲೂ ಪರಿಸ್ಥಿತಿ ಉದ್ವಿಗ್ನವಾಗಿದೆ.
'ಮಹಾರಾಷ್ಟ್ರ ಸಾರಿಗೆ ಬಂದ್ ಆಗೈತಿ, ನಮ್ಮ ಸಾರಿಗೆ ಬಂದ್ ಇದೆ ನೀವ್ಯಾಕೆ ಇಲ್ಲಿಗೆ ಬಂದ್ರಿ' ಎಂದು ಕೋಪಗೊಂಡು ಕಲ್ಲುೆಸೆದಿದ್ದಾರೆ.
ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮಹಾರಾಷ್ಟ್ರ ಸಾರಿಗೆ ನೌಕರರ ಪ್ರತಿಭಟನೆ ಇಂದಿನಿಂದ ಆರಂಭವಾಗಿದೆ. ಕಲ್ಲು ತೂರಾಟ ನಡೆದ ಬಳಿಕ ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವೆ ಸಾರಿಗೆ ಸಂಚಾರ ಬಂದ್ ಮಾಡಲಾಗಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಿಪ್ಪಾಣಿಯಲ್ಲಿ ಕರ್ನಾಟಕದ ಎಲ್ಲ ಬಸ್ ಸಂಚಾರ ಬಂದ್ ಆಗಿರುವ ಸುದ್ದಿ ಬಂದಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಕೆಎಸ್ಸಾರ್ಟಿಸಿಯು ಹೆಚ್ಚುವರಿ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಿತ್ತು.
Comments
ksrtc belagavi maharashtra karnataka protest district news ಕೆಎಸ್ಸಾರ್ಟಿಸಿ ಬೆಳಗಾವಿ ಮಹಾರಾಷ್ಟ್ರ ಕರ್ನಾಟಕ ಪ್ರತಿಭಟನೆ ಜಿಲ್ಲಾಸುದ್ದಿ
English summary
The Karnataka State Road Transport Corporation (KSRTC) on Tuesday temporarily stopped the bus services to Maharashtra after an incident of stone pelting on their bus near Kagal.