ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕೋಡಿಯಲ್ಲಿ ದನದ ಕೊಟ್ಟಿಗೆಗೆ ಬೆಂಕಿ, ಮೂಕ ಪ್ರಾಣಿಗಳು ಸಜೀವ ದಹನ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಡಿಸೆಂಬರ್ 26: ದನದ ಕೊಟ್ಟಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ದನಕರುಗಳು ಸಚೀವ ದಹನವಾಗಿರುವ ಮನಕಲುಕುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿದೆ.

ಚಿಕ್ಕೋಡಿ ತಾಲ್ಲೂಕಿನ ಯಡೂರ ಗ್ರಾಮದಲ್ಲಿ ಘಟನೆ ನಡೆದಿದ್ದು, ಎಮ್ಮೆ,ಆಕಳು ,ಆಡು ಸೇರಿದಂತೆ ಸುಮಾರು 5 ಜಾನುವಾರುಗಳು ಬೆಂಕಿಗೆ ಆಹುತಿಯಾಗಿವೆ.

ದತ್ತಾ ಸೂರ್ಯವಂಶಿ ಎಂಬ ರೈತರಿಗೆ ಸೇರಿದ ದನಕರುಗಳು ಅಗ್ನಿ ಅವಘಡದಲ್ಲಿ ಅಸುನೀಗಿದ್ದು, ಕುಟುಂಬಕ್ಕೆ ಆಧಾರವಾಗಿದ್ದ ಜಾನುವಾರುಗಳು ಮರಣ ಹೊಂದಿರುವುದರಿಂದ ಕುಟುಂಬದವರು ದಿಕ್ಕು ದೋಚದಂತಾಗಿದ್ದಾರೆ.

In a fire accident in Belagavi district 5 animals were burned alive

ನಿನ್ನೆ (ಡಿಸೆಂಬರ್ 25) ರಾತ್ರಿಯ ಸಮಯದಲ್ಲಿ ದನದನದ ಕೊಟ್ಟಿಗೆ ಬೆಂಕಿ ತಗುಲಿದ್ದು, ಮನೆಯಿಂದ ದೂರ ತೋಟದಲ್ಲಿ ದನದ ಕೊಟ್ಟಿಗೆ ಇರುವುದರಿಂದ ಘಟನೆ ಯಾರ ಗಮನಕ್ಕೂ ಬಂದಿಲ್ಲ, ಬೆಳಿಗ್ಗೆ ದತ್ತಾ ಸೂರ್ಯವಂಶಿಯವರು ತೋಟಕ್ಕೆ ಹೋದಾಗಲಷ್ಟೆ ವಿಷಯ ತಿಳಿದಿದೆ.

ಬೆಂಕಿ ಆಕಸ್ಮಿಕವಾಗಿ ತಗುಲಿದೆಯೇ ಅಥವಾ ಉದ್ದೇಶಪೂರ್ವಕವಾಗಿ ಯಾರಾದರೂ ಬೆಂಕಿ ಇಟ್ಟಿದ್ದಾರೆಯೇ ಎಂಬುದನ್ನು ಅಂಕಲಿ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.

English summary
In a fire accident in Belagavi district, Chokkodi's ydoora village 5 animals were burned alive. cattle is little far from House so no one noticed the accident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X