ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಧ್ಯಪ್ರದೇಶದಲ್ಲಿ ಮಳೆ ಬಂದರೆ ಕರ್ನಾಟಕದಲ್ಲಿ ಕೊಡೆ ಹಿಡಿಯಲ್ಲ: ಆರ್.ಅಶೋಕ್‌

|
Google Oneindia Kannada News

ಬೆಳಗಾವಿ, ಡಿಸೆಂಬರ್ 12: ಪಂಚ ರಾಜ್ಯ ಚುನಾವಣೆ ಫಲಿತಾಂಶ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಯಡಿಯೂರಪ್ಪ ಅವರು ರಾಜ್ಯದ ಸಿಎಂ ಆಗಿಯೇ ತೀರುತ್ತಾರೆ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಹೇಳಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧ್ಯಪ್ರದೇಶದಲ್ಲಿ ಮಳೆ ಬಂದರೆ ಇಲ್ಲಿ ಕೊಡೆಯುವ ಅಗತ್ಯ ಇಲ್ಲ. ಆಪರೇಷನ್ ಕಮಲದ ಹೊರತಾಗಿಯೂ ನಾವು ಸರ್ಕಾರ ರಚಿಸುತ್ತೇವೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.

ಚುನಾವಣೆ ಫಲಿತಾಂಶ, ಅಂಕಿ ಸಂಖ್ಯೆಗಳಲ್ಲಿ ಸಚಿತ್ರ ವಿವರ ಚುನಾವಣೆ ಫಲಿತಾಂಶ, ಅಂಕಿ ಸಂಖ್ಯೆಗಳಲ್ಲಿ ಸಚಿತ್ರ ವಿವರ

ಮಹಾಘಟಬಂಧನ್‌ಗೆ ತೆಲಂಗಾಣದಲ್ಲಿ ಸೋಲಾಗಿದೆ. ನರೇಂದ್ರ ಮೋದಿ ಅವರ ಸರಿಸಮಾನಾಗಬಲ್ಲ ಯಾವ ನಾಯಕನೂ ಮಹಾಘಟಬಂಧನ್‌ನಲ್ಲಿ ಇಲ್ಲ, ಮೋದಿ ಅವರು 2019ರಲ್ಲಿ ಮತ್ತೆ ಪ್ರಧಾನಿ ಆಗುವುದು ಖಾಯಂ ಎಂದು ಅವರು ಹೇಳಿದರು.

Five state election result wont effect on Karnataka politics: R.Ashok

ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆ ಇದ್ದ ಕಾರಣ ಬಿಜೆಪಿಗೆ ಸೋಲಾಗಿದೆ ಇದು ಕಾಂಗ್ರೆಸ್‌ನ ಗೆಲುವಲ್ಲ. ಈ ಫಲಿತಾಂಶದಿಂದ ನಾಯಕರು ಬೀಗುವಂತಿಲ್ಲ ಎಂದು ಅವರು ಹೇಳಿದರು.

5 ರಾಜ್ಯಗಳ ಚುನಾವಣೆ : ಸಮೀಕ್ಷೆ ಹೇಳಿದ್ದೇನು? ಫಲಿತಾಂಶ ಬಂದಿದ್ದೇನು?5 ರಾಜ್ಯಗಳ ಚುನಾವಣೆ : ಸಮೀಕ್ಷೆ ಹೇಳಿದ್ದೇನು? ಫಲಿತಾಂಶ ಬಂದಿದ್ದೇನು?

ವಿಧಾನಪರಿಷತ್‌ ಸಭಾಪತಿ ಸ್ಥಾನ ಉತ್ತರ ಕರ್ನಾಟಕದ ಬಸವರಾಜ್ ಹೊರಟ್ಟಿ ಅವರಿಗೆ ಸಿಗದೇ ಇರುವುದು ಬೇಸರ ತಂದಿದೆ. ವಿಧಾನಪರಿಷತ್‌ನಲ್ಲೂ ಹಿರಿಯ ಸದಸ್ಯರಾಗಿರುವ ಅವರಿಗೆ ಸಭಾಪತಿ ಸ್ಥಾನ ನೀಡಬೇಕಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಒಮ್ಮತವಿಲ್ಲ ಎಂಬುದನ್ನು ಇಂದಿನ ಸಭಾಪತಿ ಆಯ್ಕೆ ಸ್ಪಷ್ಟಪಡಿಸಿದೆ ಎಂದು ಆರೋಪಿಸಿದರು.

English summary
Five state election result would not effect on Karnataka politics says BJP leader R.Ashok. He said No leader like Narendra Modi in grand alliance. Modi will definitely become PM again in 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X