ಉತ್ತರ ಕರ್ನಾಟಕ ಅಭಿವೃದ್ಧಿ ಮಾಡಿ, ಡಿಸ್ನಿಲ್ಯಾಂಡ್ ಆಮೇಲೆ: ಯಡಿಯೂರಪ್ಪ
ಬೆಳಗಾವಿ, ಡಿಸೆಂಬರ್ 14: ಮೊದಲು ಉತ್ತರ ಕರ್ನಾಟಕ ಅಭಿವೃದ್ಧಿ ಮಾಡಿ ಅದನ್ನು ಬಿಟ್ಟು ಡಿಸ್ನೀಲ್ಯಾಂಡ್ ಕಟ್ಟಲು ಹೋಗಬೇಡಿ ಎಂದು ವಿರೋಧ ಪಕ್ಷ ನಾಯಕ ಯಡಿಯೂರಪ್ಪ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಈ ಸರ್ಕಾರಕ್ಕೆ ಉತ್ತರ ಕರ್ನಾಟಕಕ್ಕಿಂತಲೂ ಡಿಸ್ನೀಲ್ಯಾಂಡ್ ಹೆಚ್ಚಾಗಿದೆ, ಇದು ನಿರ್ಲಕ್ಷ್ಯದ ಪರಮಾವಧಿ ಎಂದು ಅವರು ಹೇಳಿದರು.
5 ಸ್ಟಾರ್ ಹೋಟೆಲ್ ನಿಂದ ಆಡಳಿತ ನಡೆಸಿದ ಮೊದಲ ಸಿಎಂ ಎಚ್ಡಿಕೆ: ಯಡಿಯೂರಪ್ಪ
ನೀರಾವರಿ ಯೋಜನೆಗಳನ್ನು ಮಾಡಿ ಬರ ನೀಗಿಸುವುದು ಬಿಟ್ಟು ಡಿಸ್ನೀಲ್ಯಾಂಡ್ ಮಾಡುತ್ತೇವೆ ಎನ್ನುತ್ತಿರುವುದು ಸರ್ಕಾರದ ಬೇಜವಾಬ್ದಾರಿತನ ತೋರಿಸುತ್ತದೆ. ಯಾವುದಕ್ಕೆ ಆದ್ಯತೆ ಕೊಡಬೇಕು ಎನ್ನುವುದೇ ಈ ಸರ್ಕಾರಕ್ಕೆ ಗೊತ್ತಾಗುತ್ತಿಲ್ಲ ಎಂದು ಅವರು ಯಡಿಯೂರಪ್ಪ ದೂರಿದರು.
ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಸೋಮವಾರದಿಂದ ಹೋರಾಟ ಮಾಡುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.
ಕೆಆರ್ ಎಸ್ ಡಿಸ್ನಿಲ್ಯಾಂಡ್ ಮಾದರಿ ಉದ್ಯಾನ: ಆತಂಕ ಬೇಡ ಎಂದ ಎಚ್ಡಿಕೆ
ಸರ್ಕಾರವು ಕೆ.ಆರ್.ಎಸ್ ಅನ್ನು ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿ ಮಾಡುವ ಯೋಜನೆಯನ್ನು ರೂಪಿಸಿದ್ದು, ಡಿಪಿಆರ್ ಸಹ ತಯಾರಿಸಿದೆ.