ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಲೆ ಕುಸಿಯಿತು ಎಂಬ ಸಿಟ್ಟಲ್ಲಿ ಟೊಮೆಟೊ ಪುಕ್ಕಟೆ ಹಂಚಿದ ರೈತ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಫೆಬ್ರವರಿ 3 : ಟೊಮೆಟೊ ಬೆಲೆ ಕುಸಿತದಿಂದ ಆಕ್ರೋಶಗೊಂಡ ರೈತರೊಬ್ಬರು ಸಾರ್ವಜನಿಕರಿಗೆ ಪುಕ್ಕಟೆ ವಿತರಿಸಿ, ಪ್ರತಿಭಟಿಸಿದ್ದಾರೆ. ರಾಜ್ಯ ಸರಕಾರದ ವಿರುದ್ಧ ಶನಿವಾರ ತೀವ್ರ ಆಕ್ರೋಶ ವ್ಯಕ್ತಪಡಿದ್ದಾರೆ. ಟೊಮೆಟೊ ಬೆಲೆ ಕುಸಿದ ಪರಿಣಾಮವಾಗಿ ರೈತರು ಉಚಿತವಾಗಿ ಟೊಮೆಟೊ ನೀಡಿ, ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಎಲ್ಲರ ಗಮನ ಸೆಳೆದರು.

ಕೃಷಿ ವಿವಿಗಳ ಸಂಶೋಧನೆಯ ಫಲ ರೈತರನ್ನೂ ತಲುಪಲಿ: ಸಿಎಂಕೃಷಿ ವಿವಿಗಳ ಸಂಶೋಧನೆಯ ಫಲ ರೈತರನ್ನೂ ತಲುಪಲಿ: ಸಿಎಂ

ಟೊಮೆಟೊ ಬೆಳೆದ ನಾರಾಯಣ್ ಪಾಟೀಲ ಎಂಬ ರೈತರಿಂದ ಈ ರೀತಿಯ ವಿನೂತನ ಪ್ರತಿಭಟನೆ ನಡೆಯಿತು. ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಮುಂದೆ ವಾಹನದಲ್ಲಿ ಟೊಮೆಟೊ ತುಂಬಿಕೊಂಡು ಬಂದು ಸಾರ್ವಜನಿಕರಿಗೆ ಉಚಿತವಾಗಿ ನೀಡಿದರು. ಟೊಮೆಟೊ ಬೆಲೆ ಕುಸಿದ ಪರಿಮಾಣ ಸರಕಾರ ಬೆಂಬಲ ಬೆಲೆ ಘೋಷಣೆ ಮಾಡುವಂತೆ ರಾಜ್ಯ ಸರಕಾರಕ್ಕೆ ಆಗ್ರಹ ಪಡಿಸಿದ್ದು ವಿಶೇಷವಾಗಿತ್ತು

Farmer distributed tomato free, protest against price drop

ಉಚಿತವಾಗಿ ಟೊಮೆಟೊ ಸಿಕ್ಕಿದ್ದರಿಂದ ನಾ ಮುಂದು ತಾ ಮುಂದು ಎಂದು ಟೊಮೆಟೊ ತೆಗೆದುಕೊಂಡು ಹೋದರು ಸಾರ್ವಜನಿಕರು. ರೈತರ ಸಮಸ್ಯೆ ಏನು ಅಂತ ತಿಳಿದುಕೊಳ್ಳುವ ಪುರಸೊತ್ತು ಕೂಡ ಅವರಿಗೆ ಇರಲಿಲ್ಲ. ಟ್ರ್ಯಾಕ್ಟರ್ ಟ್ರ್ಯಾಲಿ ಟೊಮೆಟೋ ಕ್ಷಣಾರ್ಧದಲ್ಲಿ ಖಾಲಿಯಾಯಿತು.

English summary
To record protest against price drop farmer Narayan Patil distributed tomato free to public in Belagavi on Saturday. People did not ask reason for this. They just pick the tomato and left.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X