ಒಡೆದು ಹೋದ ಬೆಳಗಾವಿಯ ತಿಲೋಲಿ ಸೇತುವೆ: ಹಳ್ಳಿಗಳ ಸಂಪರ್ಕ ಕಡಿತ
ಬೆಳಗಾವಿ, ಜುಲೈ.16: ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜಿಲ್ಲೆಯ ಖಾನಾಪೂರ ತಾಲೂಕಿನ ತಿಲೋಲಿ ಸೇತುವೆ ಒಡೆದು ಹೋಗಿದೆ. ಇದರಿಂದ ಖಪಾತ ಸೇರಿ ಅನೇಕ ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ.
ಇದೀಗ ಸೇತುವೆ ಒಡೆದು ಹೋಗಿರುವುದರಿಂದ ಈ ಭಾಗದ ವಿದ್ಯಾರ್ಥಿಗಳು ಸದ್ಯ ಶಾಲೆಗೆ ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ 5 ವರ್ಷಗಳಲ್ಲಿ ಈ ಸೇತುವೆಯನ್ನು ಎರಡು ಬಾರಿ ದುರುಸ್ಥಿಗೊಳಿಸಲಾಗಿತ್ತು. ಆದರೆ ಕಳಪೆ ಕಾಮಗಾರಿಗಳಿಂದಾಗಿ ಈ ಸೇತುವೆ ಮತ್ತೆ ಒಡೆದಿದೆ.
ಕಾಫಿನಾಡಲ್ಲಿ ಮಳೆ ಹಾವಳಿ: 30 ವರ್ಷಗಳ ನಂತರ ಮುಳುಗಿದ ಹೆಬ್ಬಾಳೆ ಸೇತುವೆ!
ಹೀಗಾಗಿ ಆ ಪ್ರದೇಶವು ನಡುಗಡ್ಡೆಯಂತಾಗಿದೆ. ಈ ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆ ಗಮನಿಸಿದರೆ ಕನಿಷ್ಟ 15 ದಿನಗಳವರೆಗೆ ಪ್ರವಾಹ ತಗ್ಗಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ ಸ್ಥಳೀಯರು.
ಇದು ಖಾನಾಪೂರ ತಾಲೂಕಿನ ಪರಿಸ್ಥಿಯಾದರೆ, ಗಾಳಿ ಮಳೆಗೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ನಲ್ಲಿ ಇಂದು ಸೋಮವಾರ ಮರಗಳು ಧರೆಗುರುಳಿವೆ. ಈ ಹಿನ್ನೆಲೆಯಲ್ಲಿ ಸುಮಾರು 1 ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಆಗಿದೆ.
ನಂತರ ಜೆಸಿಬಿ ಮೂಲಕ ಅಧಿಕಾರಿಗಳು ತೆರವು ಕಾರ್ಯ ನಡೆಸಿದ್ದಾರೆ. ಚಾರ್ಮಾಡಿ ಘಾಟ್ ನ ಅಣ್ಣಪ್ಪ ಸ್ವಾಮಿ ದೇವಾಲಯದ ಸಮೀಪ ಮರಗಳು ಧರೆಗುರುಳಿವೆ.