ಮೇ 4ರಿಂದ ಆರಂಭಗೊಳ್ಳಲಿವೆ ಕೈಗಾರಿಕೆಗಳು; ಏನೇನೆಲ್ಲಾ ಚರ್ಚೆ ನಡೆಯಿತು?
ಬೆಳಗಾವಿ, ಮೇ 02: ಮೇ 4ರಿಂದ ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಉಳಿದ ಕಡೆ ಎಲ್ಲ ರೀತಿಯ ಕೈಗಾರಿಕೆ ಆರಂಭಕ್ಕೆ ಮುಖ್ಯಮಂತ್ರಿಗಳು ನಿರ್ಧಾರ ಮಾಡಿದ್ದಾರೆ. ಕೈಗಾರಿಕೆ ಆರಂಭಿಸಲು ಅನುಮತಿ ಅಗತ್ಯವಿಲ್ಲ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಿಗೆ ಸ್ವಯಂ ಘೋಷಣಾಪತ್ರ ಸಲ್ಲಿಸಿ ಕೈಗಾರಿಕೆ ಆರಂಭಿಸಬಹುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಉದ್ಯಮಬಾಗದ ಬೆಳಗಾವಿ ಫೌಂಡ್ರಿ ಕ್ಲಸ್ಟರ್ ಸಭಾಂಗಣದಲ್ಲಿ ಇಂದು ನಡೆದ ಕೈಗಾರಿಕೋದ್ಯಮಿಗಳ ಸಭೆಯಲ್ಲಿ ಅವರು ಮಾತನಾಡಿದರು. ಮೇ ನಾಲ್ಕರ ನಂತರ ಕೈಗಾರಿಕೆಗಳ ಕಾರ್ಯಾರಂಭದ ಕುರಿತು ಹಲವು ಮಾಹಿತಿಗಳನ್ನು ಹಂಚಿಕೊಂಡರು.
ಎರಡು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆ
ಕಾರ್ಮಿಕರಿಗೆ ಪಾಸ್ ಅಗತ್ಯವಿಲ್ಲ
"ಕಾರ್ಮಿಕರಿಗೆ ಪಾಸ್ ಅಗತ್ಯವಿಲ್ಲ. ಕೈಗಾರಿಕೆಗಳ ಆರಂಭಕ್ಕೆ ಎಲ್ಲ ರೀತಿಯ ಅಗತ್ಯ ನೆರವು ನೀಡಲು ಸರ್ಕಾರ ಸಿದ್ಧವಿದೆ. ಸಣ್ಣ ಕೈಗಾರಿಕೆಗಳಿಗೆ ವಿಶೇಷ ಪ್ಯಾಕೇಜ್ ನೀಡುವ ಬಗ್ಗೆ ಚರ್ಚೆ ನಡೆದಿದ್ದು, ಆದಷ್ಟು ಬೇಗನೆ ಈ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗಿದೆ. ವಿಶೇಷ ಪ್ಯಾಕೇಜ್ ಘೋಷಣೆಗೆ ಈಗಾಗಲೇ ಪ್ರಸ್ತಾವ ಕೂಡ ಸಲ್ಲಿಸಲಾಗಿದೆ. ಪ್ರಧಾನಮಂತ್ರಿಗಳು ಇದರ ಬಗ್ಗೆ ಘೊಷಣೆ ಮಾಡಬಹುದು" ಎಂದು ತಿಳಿಸಿದರು.
ಕಾರ್ಮಿಕರ ಆರೋಗ್ಯದ ಸುರಕ್ಷತೆಗೆ ಮನವಿ
ಈ
ಸಮಯದಲ್ಲಿ
ಕಾರ್ಮಿಕರ
ಆರೋಗ್ಯ
ಮತ್ತು
ಸುರಕ್ಷತೆ
ಬಗ್ಗೆಯೂ
ಕ್ರಮ
ಕೈಗೊಳ್ಳಬೇಕು
ಎಂದು
ಕೈಗಾರಿಕೋದ್ಯಮಿಗಳಿಗೆ
ಜಗದೀಶ್
ಶೆಟ್ಟರ್
ಮನವಿ
ಮಾಡಿಕೊಂಡರು.
ಕೊರೊನಾ
ಸೋಂಕನ್ನು
ಸವಾಲಾಗಿ
ಸ್ವೀಕರಿಸಿ
ಎಲ್ಲರೂ
ಒಟ್ಟಾಗಿ
ಇದನ್ನು
ಎದುರಿಸಬೇಕಿದೆ.
ವಿದ್ಯುತ್
ಬಿಲ್
ಭರಿಸಲು
ಕಾಲಾವಕಾಶ
ನೀಡಲಾಗುತ್ತದೆ
ಎಂದು
ಸಚಿವ
ಶೆಟ್ಟರ್
ಹೇಳಿದರು.
ಲಾಕ್
ಡೌನ್
ಯಶಸ್ಸಿಗೆ
ಕೈಗಾರಿಕೋದ್ಯಮಿಗಳು,
ವ್ಯಾಪಾರಸ್ಥರು,
ಸಾಮಾನ್ಯ
ಜನ
ಸೇರಿದಂತೆ
ಎಲ್ಲರೂ
ಸಹಕಾರ
ನೀಡಿದ್ದಾರೆ.
ಲಾಕ್
ಡೌನ್
ಮುಂದುವರಿಸಿದ್ದರೂ
ಹಂತ
ಹಂತವಾಗಿ
ವಿವಿಧ
ಬಗೆಯ
ಚಟುವಟಿಕೆಗಳಿಗೆ
ಅವಕಾಶ
ನೀಡಲಾಗಿದೆ.
ಝೋನ್
ಗಳ
ಆಧಾರದ
ಮೇಲೆ
ಕೈಗಾರಿಕೆ
ಮತ್ತಿತರ
ಚಟುವಟಿಕೆಗಳಿಗೂ
ಅನುಮತಿ
ನೀಡಲಾಗಿದೆ
ಎಂದರು.
"ಉಳಿದ ಕಡೆ ಕಾರ್ಮಿಕರ ಸಂಚಾರಕ್ಕೆ ತೊಂದರೆಯಿಲ್ಲ"
ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ್ ಕೋರೆ ಮಾತನಾಡಿ, ಸಕ್ಕರೆ ಕಾರ್ಖಾನೆ ಸೇರಿದಂತೆ ಕೆಲವು ಕಾರ್ಖಾನೆಗಳು 24 ಗಂಟೆ ಕಾರ್ಯನಿರ್ವಹಿಸಬೇಕಾಗುತ್ತದೆ. ಆದ್ದರಿಂದ ನಿರಂತರ ಕಾರ್ಯನಿರ್ವಹಣೆಗೆ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು. ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಮಾತನಾಡಿ, ಕಾರ್ಮಿಕರಿಗೆ ಪಾಸ್ ಗಳ ಅಗತ್ಯವಿಲ್ಲದಿರುವುದರಿಂದ ದ್ವಿಚಕ್ರ ವಾಹನಗಳಲ್ಲಿ ಒಬ್ಬರೇ ಬರಬಹುದು. ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಉಳಿದ ಕಡೆಗಳಿಂದ ಕಾರ್ಮಿಕರು ಮುಕ್ತವಾಗಿ ಸಂಚರಿಸಬಹುದು ಎಂದರು.
ಕೆಲಸದ ಅವಧಿ ವಿಸ್ತರಣೆಗೆ ಮನವಿ
ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಶ್ರೀಧರ ಉಪ್ಪಿನ ಮಾತನಾಡಿ, ಕೈಗಾರಿಕಾ ಕಾರ್ಮಿಕರಿಗೆ ಅಗತ್ಯವಿರುವ ಪಾಸ್ ಗಳನ್ನು ವಿತರಿಸಬೇಕು ಹಾಗೂ ಮುಂದಿನ ನಾಲ್ಕು ತಿಂಗಳ ಅವಧಿಯಲ್ಲಿ ಕೆಲಸದ ಅವಧಿಯನ್ನು ನಾಲ್ಕು ಗಂಟೆಗಳ ಕಾಲ ವಿಸ್ತರಿಸಬೇಕು ಎಂದು ಮನವಿ ಮಾಡಿಕೊಂಡರು. ಇದರೊಂದಿಗೆ ಉದ್ಯಮಿಗಳಿಗೆ ಶೇ.3ಕ್ಕಿಂತ ಕಡಿಮೆ ಬಡ್ಡಿ ದರದಲ್ಲಿ ಹೆಚ್ಚಿನ ಸಾಲ ಸೌಲಭ್ಯ ನೀಡಬೇಕು ಎಂದು ಕೋರಿದರು. ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ರೋಹನ ಜವಳಿ ಮಾತನಾಡಿ, ಕೈಗಾರಿಕೆಗಳ ಜತೆಗೆ ಕಚ್ಚಾಸಾಮಗ್ರಿ ಪೂರೈಕೆ ಘಟಕಗಳನ್ನು ಆರಂಭಿಸಿದರೆ ಮಾತ್ರ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಬೇಕು ಎಂದು ಹೇಳಿದರು.
ಮೇ 4 ರಿಂದ ಕರ್ನಾಟಕದಲ್ಲಿ ಕೈಗಾರಿಕೆ ಪುನಾರಂಭಕ್ಕೆ ಸಿದ್ಧತೆಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ್ ಪಾಟೀಲ, ಶಾಸಕರಾದ ಪಿ.ರಾಜೀವ, ಅನಿಲ್ ಬೆನಕೆ, ಬುಡಾ ಅಧ್ಯಕ್ಷ ಗೂಳಪ್ಪ ಹೊಸಮನಿ, ಕೋವಿಡ್ 19 ಉಸ್ತುವಾರಿ ಅಧಿಕಾರಿ ರಾಜೇಂದ್ರ ಚೋಳನ್, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಪೊಲೀಸ್ ಆಯುಕ್ತರಾದ ಬಿ.ಎಸ್. ಲೋಕೇಶ್ ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮತ್ತಿತರರು ಉಪಸ್ಥಿತರಿದ್ದರು.