ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭೀಮಾತೀರದ ಚಡಚಣ ಹತ್ಯೆ ಆರೋಪಿಗಳ ಜಾಮೀನು ರದ್ದುಪಡಿಸಲು ಮನವಿ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಜುಲೈ 25: ಭೀಮಾತೀರದ ಚಡಚಣನ ತಾಯಿ ವಿಮಲಾಬಾಯಿ ಚಡಚಣ ಅಜ್ಞಾತ ಸ್ಥಳವೊಂದರಿಂದ ವಿಡಿಯೋ ಬಿಡುಗಡೆ ಮಾಡಿದ್ದು, "ನನಗೆ ಜೀವ ಭಯ ಇದೆ. ನನ್ನ ಮಗನ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿ. ನನಗೆ ರಕ್ಷಣೆ ನೀಡಬೇಕು ಹಾಗೂ ಚಡಚಣ ಹತ್ಯೆಯ ಆರೋಪಿಗಳಾದ ಸಿಪಿಐ ಎಂ.ಬಿ. ಅಸೋಡೆ ಹಾಗೂ ಪಿಎಸ್ ಐ ಗೋಪಾಲ ಹಳ್ಳೂರರ ಜಾಮೀನು ರದ್ದು ಮಾಡಬೇಕು" ಎಂದು ಮನವಿ ಮಾಡಿದ್ದಾರೆ.

ಧರ್ಮರಾಜ್ ಚಡಚಣ ಹತ್ಯೆ ಪ್ರಕರಣ: ಆರೋಪಿಗಳಿಗೆ ಜಾಮೀನುಧರ್ಮರಾಜ್ ಚಡಚಣ ಹತ್ಯೆ ಪ್ರಕರಣ: ಆರೋಪಿಗಳಿಗೆ ಜಾಮೀನು

ಚಡಚಣ ಸಹೋದರರ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾದ ಅಸೋಡೆ ಹಾಗೂ ಗೋಪಾಲ ಹಳ್ಳೂರ ಈಚೆಗೆ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದರು. ಚಡಚಣ ಹತ್ಯೆಯ ಪ್ರಮುಖ ಆರೋಪಿ ಮಹದೇವ ಸಾಹುಕಾರನ ಜನ್ಮ ದಿನದ ಕಾರ್ಯಕ್ರಮದಲ್ಲಿ ಎಂ.ಬಿ. ಅಸೋಡೆ ಹಾಗೂ ಗೋಪಾಲ ಹಳ್ಳೂರ ಭಾಗಿ ಆಗಿದ್ದರು.

ಜೈಲಿನಿಂದ ಹೊರಬಂದ ಚಡಚಣ ಸಹೋದರರ ಕೊಲೆ ಆರೋಪಿಗೆ ಭರ್ಜರಿ ಸ್ವಾಗತಜೈಲಿನಿಂದ ಹೊರಬಂದ ಚಡಚಣ ಸಹೋದರರ ಕೊಲೆ ಆರೋಪಿಗೆ ಭರ್ಜರಿ ಸ್ವಾಗತ

ಈ ಮೂವರು ಮತ್ತೆ ಒಟ್ಟಾಗಿರುವುದರಿಂದ ಚಡಚಣ ಕುಟುಂಬ ಹಾಗೂ ಸಹೋದರರಿಗೆ ಭಯ ಉಂಟು ಮಾಡಿದೆ ಎನ್ನಲಾಗುತ್ತಿದೆ. ಆದ್ದರಿಂದ ಚಡಚಣ ತಾಯಿ ವಿಮಲಾ ಬಾಯಿ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಮಹದೇವ ಸಾಹುಕಾರ, ಅಸೋಡೆ ಹಾಗೂ ಹಳ್ಳೂರರಿಂದ ನನಗೆ ಹಾಗೂ ನನ್ನ ಕುಟುಂಬಕ್ಕೆ ಜೀವ ಭಯವಿದೆ ಎಂದು ಹೇಳಿದ್ದಾರೆ.

chadachana mother Vimalabhai requested to hand over her son case to cbi

ಈ ಆರೋಪಿಗಳ ಜಾಮೀನು ರದ್ದುಪಡಿಸಬೇಕು, ಹತ್ಯೆಯ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ವಿಮಲಾಬಾಯಿ ಮನವಿ ಮಾಡಿಕೊಂಡಿದ್ದಾರೆ.

English summary
chadachana mother Vimalabhai has released a video from an unknown place and requested to hand over her son case to cbi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X