ಬೆಳಗಾವಿಯಲ್ಲಿ ವಿನೂತನ Water public transportಗೆ ಶಾಸಕ ಅಭಯ ಪಾಟೀಲ ಪ್ಲಾನ್
ಬೆಳಗಾವಿ, ಜೂನ್ 02: ಬೆಳಗಾವಿ ನಗರದಲ್ಲಿ ಶಿಥಿಲವಾಗಿರುವ ನಾಲೆಗಳನ್ನು ವಿಸ್ತರಿಸಿ, ನಾಲೆಗಳಲ್ಲಿ ಚರಂಡಿ ನೀರು ಸೇರದಂತೆ ಪೈಪ್ ಲೈನ್ ಮಾಡಿ, ಬೋಟಿಂಗ್ ವ್ಯವಸ್ಥೆ ಮಾಡುವ ವಿನೂತನ ಯೋಜನೆಯನ್ನು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ರೂಪಿಸಿದ್ದಾರೆ. ಅತೀ ಶೀಘ್ರದಲ್ಲಿ ಬೆಳಗಾವಿ ನಗರಕ್ಕೆ ಈ "Water public transport" ಹೊಸರ ಮೆರಗು ನೀಡಲಿದೆ ಎಂದು ತಿಳಿಸಿದರು.
ಈ ಯೋಜನೆ ಕುರಿತು ಇಂದು ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಶಾಸಕ ಅಭಯ ಪಾಟೀಲ ಸುದೀರ್ಘ ಚರ್ಚೆ ನಡೆಸಿದರು.
ಬೆಳಗಾವಿಯಲ್ಲೊಂದು ಹೈಟೆಕ್ ಬಸ್ ನಿಲ್ದಾಣ, ವೈ-ಫೈ, ಕೆಫೆಟೇರಿಯಾ!
ಸುಮಾರು 3 ಕಿ.ಮೀ ವ್ಯಾಪ್ತಿ ಇರುವ "ನಗ್ಜರಿ ನಾಲಾ"ವನ್ನು ವಿಸ್ತರಿಸಿ, ಯಾವ ರೀತಿಯಲ್ಲಿ ಬೋಟ್ ಮುಖಾಂತರ water public transport (ಜಲ ಸಾರ್ವಜನಿಕ ಸಾರಿಗೆ) ಯೋಜನೆ ಕೈಗೊಳ್ಳಬಹುದು ಎಂಬುದನ್ನು ಶಾಸಕರು ಸಭೆಯಲ್ಲಿ ಮಂಡಿಸಿದರು. ಈ ಪರಿಕಲ್ಪನೆಯಿಂದ ಪ್ರವಾಸಿಗರನ್ನು ಆಕರ್ಷಿಸಲು, ರಸ್ತೆ ಸಾರಿಗೆ ಜನದಟ್ಟಣೆಯನ್ನು ನಿಯಂತ್ರಿಸಲು ಸಹಕಾರಿಯಾಗುವ ನಿರೀಕ್ಷೆ ಇದೆ ಎಂದರು.
ಇಡೀ ಬೆಳಗಾವಿ ನಗರ ಸೌಂದರ್ಯಕ್ಕೆ ಆದ್ಯತೆ ನೀಡುವ ಭಾಗವಾಗಿ ಈ ಯೋಜನೆ ಕೈಗೊಂಡಿದ್ದು, ರಾಜ್ಯದಲ್ಲಿ ಇದು ಪ್ರಥಮ ಪ್ರಯತ್ನ ಎನ್ನಬಹುದು ಎಂದರು. ಈ ಯೋಜನೆಯನ್ನು ಜನವಸತಿ ಪ್ರದೇಶಗಳಾದ ನಿತ್ಯಾನಂದ ನಗರ, ಘೋಡ್ಸೆವಾಡಿ, ಜೌಗಲೆವಾಡಿ, ಅಯೋಧ್ಯಾ ನಗರ, S. V. ಕಾಲನಿ, ಶಾಂತಿ ಕಾಲನಿ, ಮರಾಠಾ ಕಾಲನಿ, ಜಕ್ಕೆರಿ ಹೊಂಡ, ಶಾಸ್ತ್ರೀ ನಗರ, ಕಪಲೇಶ್ವರ ಕಾಲನಿ, ಮಹಾದ್ವಾರ ರೋಡ ಭಾಗಗಳಲ್ಲಿ ಕೈಗೊಳ್ಳಲು ನಿರ್ಧರಿಸಲಾಗಿದೆ.