ಬೆಳಗಾವಿ- ಪುಣೆ ರಾಷ್ಟ್ರೀಯ ಹೆದ್ದಾರಿ 4 ಜಲಾವೃತ; ಸಂಚಾರ ಬಂದ್
ಬೆಳಗಾವಿ, ಆಗಸ್ಟ್ 6: ಜಿಲ್ಲಾದ್ಯಂತ ರಭಸದ ಮಳೆ ಮುಂದುವರಿದಿದ್ದು, ಬೆಳಗಾವಿ- ಕೊಲ್ಹಾಪುರ ರಾಷ್ಟ್ರೀಯ ಹೆದ್ದಾರಿ 4 ಜಲಾವೃತವಾಗಿ ಹೊಳೆಯಂತೆ ಕಾಣುತ್ತಿದೆ. ಕೇವಲ ಅರ್ಧ ಗಂಟೆಯಲ್ಲಿ 2 ಕಿಲೋ ಮೀಟರ್ವರೆಗೂ ನೀರು ತುಂಬಿಕೊಂಡು ಹೆದ್ದಾರಿಯ ಗುರುತೇ ಸಿಗದಂತಾಗಿದೆ.
ನೀರು ಸಂಪೂರ್ಣ ಇಳಿಯುವವರೆಗೂ ಸಂಚಾರ ಮಾಡದಂತೆ ಬೆಳಗಾವಿಯ ಉತ್ತರ ವಲಯ ಐಜಿ ರಾಘವೇಂದ್ರ ಸುಹಾಸ್ ಮನವಿ ಮಾಡಿದ್ದಾರೆ.
ಮಳೆ: ಕರಾವಳಿಯಲ್ಲಿ ಆರೆಂಜ್ ಅಲರ್ಟ್, ಹಲವು ಕಡೆ ಶಾಲೆಗಳಿಗೆ ರಜೆ
ಸುತ್ತಗಟ್ಟಿ ಘಾಟ್ ನಲ್ಲೂ ಮಳೆಯಿಂದಾಗಿ ರಸ್ತೆಯಲ್ಲಿ ಒಂದು ಕಿಲೋ ಮೀಟರ್ ವರೆಗೂ ನೀರು ತುಂಬಿಕೊಂಡಿದೆ. ನಡುರಸ್ತೆಯಲ್ಲಿ ಆಂಬ್ಯುಲೆನ್ಸ್ ಸಿಕ್ಕಿಹಾಕಿಕೊಂಡ ಘಟನೆಯೂ ನಡೆದಿದೆ.
ರೈಲ್ವೆ ಪೊಲೀಸ್ ಠಾಣೆಗೆ ನುಗ್ಗಿದ ನೀರು: ಬಿರುಸುಗೊಂಡ ಮಳೆಯಿಂದಾಗಿ ರೈಲ್ವೆ ಪೊಲೀಸ್ ಠಾಣೆಗೂ ನೀರು ನುಗ್ಗಿದೆ. ಸುಮಾರು ಎರಡು ಅಡಿಯಷ್ಟು ನೀರು ಒಳಗೆ ನುಗ್ಗಿದ್ದು, ಠಾಣೆಯಲ್ಲಿನ ದಾಖಲಾತಿಗಳು ಒದ್ದೆಯಾಗಿವೆ.
ಬಾಗಲಕೋಟೆ : ಕೃಷ್ಣಾ ನದಿ ಪ್ರವಾಹ, ಸಂತ್ರಸ್ತರ ರಕ್ಷಣೆ
ಬೆಳಗಾವಿ, ಖಾನಾಪುರ, ಬೈಲಹೊಂಗಲ ತಾಲೂಕಿನಲ್ಲಿ ಜನ ಜೀವನ ದುಸ್ತರವಾಗಿದೆ. ಈ ಭಾಗಗಳಲ್ಲಿ ಮನೆಗಳ ಗೋಡೆ ಕುಸಿತವಾದ ವರದಿಯಾಗಿದ್ದು, ಮಳೆ ಅಬ್ಬರಕ್ಕೆ ಜನ-ಜಾನುವಾರುಗಳು ನಲುಗಿ ಹೋಗಿದ್ದಾರೆ. ಈ ಕಾರಣದಿಂದಾಗಿ ಇಂದು, ನಾಳೆ ಬೆಳಗಾವಿ ಜಿಲ್ಲೆಯ ರಾಮದುರ್ಗ ಹೊರತುಪಡಿಸಿ ಎಲ್ಲಾ ಶಾಲೆಗಳಿಗೆ ಬೆಳಗಾವಿ ಡಿಸಿ ಎಸ್.ಬಿ.ಬೊಮ್ಮನಹಳ್ಳಿ ಅವರು ರಜೆ ಘೋಷಿಸಿದ್ದಾರೆ.