ನಿಧಿಗಾಗಿ ಮಗು ಬಲಿಕೊಡಲು ಯತ್ನ, ಮಹಿಳೆ ಬಂಧನ
ಬೆಳಗಾವಿ, ಸೆಪ್ಟೆಂಬರ್ 19 : ನಿಧಿ ಆಸೆಗಾಗಿ 14 ತಿಂಗಳ ಹೆಣ್ಣು ಮಗುವನ್ನು ಬಲಿ ಕೊಡಲು ಯತ್ನಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಸ್ಥಳೀಯರು ಮಗುವನ್ನು ರಕ್ಷಣೆ ಮಾಡಿದ್ದು, ಬಲಿ ಕೊಡಲು ಹೊರಟಿದ್ದ ಮಹಿಳೆಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಶೀರಿನಾ ಜಮಾದಾರ್ ಎಂಬ ಮಹಿಳೆ ಮಹಾಲಯ ಅಮಾವಾಸ್ಯೆಯ ದಿನವಾದ ಇಂದು ಮಗುವನ್ನು ಬಲಿ ಕೊಡಲು ಪ್ರಯತ್ನ ನಡೆಸಿದ್ದಳು. ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಶೀರಿನಾ ಮನೆಯ ಮಾಲೀಕನ ಮಗಳನ್ನು ಬಲಿಕೊಡಲು ಮುಂದಾಗಿದ್ದಳು.
ಮೈಸೂರು: ಅಮಾವಾಸ್ಯೆ ದಿನವೇ ಆಸ್ಪತ್ರೆಯಲ್ಲಿ ವಾಮಾಚಾರ
ಮನೆಯಲ್ಲಿ ಮಗುವನ್ನು ಬಲಿಕೊಡಲು ಸಿದ್ಧತೆ ಮಾಡಲಾಗಿತ್ತು. ಮನೆಯ ವೊಳಗೆ 8 ಅಡಿ ಉದ್ದದ ಗುಂಡಿ ತೋಡಲಾಗಿತ್ತು. ಗುಂಡಿಯಲ್ಲಿ ಮಗುವನ್ನು ಇಡಲು ಹೋದಾಗ ಅದು ಚೀರಿಕೊಂಡಿದೆ. ಆಗ ಸ್ಥಳೀಯರು ಬಂದು ಗಮನಿಸಿದಾಗ ಶೀರಿನಾ ಕೃತ್ಯ ಬಯಲಾಗಿದೆ.
ಗೋಣಿ ಚೀಲದಲ್ಲಿ ಬಾಲಕಿ ಶವ, ನಿಧಿಗಾಗಿ ಬಲಿ ನೀಡಿದರೆ?
ಸ್ಥಳೀಯರು ಮಗುವನ್ನು ರಕ್ಷಣೆ ಮಾಡಿ, ಶಿರೀನಾಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಶೀರಿನಾಗೆ ನಿಧಿ ತೆಗೆದಯಲು ಸಹಕಾರ ನೀಡುತ್ತಿದ್ದ ಮುಸಾಬಿ ಮುಲ್ಲಾ, ಜಾವೇದ ಮುಲ್ಲಾ, ಫಾರೂಕ್ ಮುಲ್ಲಾ ಮತ್ತು ಸೋನಾ ಎಂಬುವವರು ಪರಾರಿಯಾಗಿದ್ದಾರೆ.
ಕೊಳ್ಳೇಗಾಲದ ಮಾಟಳ್ಳಿಯಲ್ಲಿ ಕೇಳುವುದು ಬರೀ ಸಾವಿನ ಸದ್ದು!
ಬೆಳಗಾವಿ ಮಾರ್ಕೆಟ್ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಶೀರಿನಾ ಬಂಧಿಸಿದ್ದಾರೆ. ಪರಾರಿಯಾಗಿರುವ ಆರೋಪಿಗಳಿಗಾಗಿ ಹುಡುಕಾಟ ಮುಂದುವರೆದಿದೆ. ಇನ್ನೂ ನಾಲ್ವರು ಮಕ್ಕಳನ್ನು ಬಲಿಕೊಡಲು ಆರೋಪಿಗಳು ಸಂಚು ರೂಪಿಸಿದ್ದರು ಎಂಬುದು ತನಿಖೆಯ ವೇಳೆ ತಿಳಿದುಬಂದಿದೆ.