ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಸ್ಕ್ ಧರಿಸಿದವರನ್ನು ಕಂಡ್ರೆ ರಾಮಾಯಣ ನೆನಪಾಗುತ್ತೆ ಅಂದಿದ್ದೇಕೆ ಸಂಸದ ಹೆಗಡೆ?

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಆಗಸ್ಟ್ 19: ಮಾಸ್ಕ್ ಧರಿಸಿದವರನ್ನು ನೋಡಿದರೆ ನನಗೆ ರಾಮಾಯಣ ನೆನಪಾಗುತ್ತಿದೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ವಿವಾದದ ಸುಳಿಗೆ ಸಿಲುಕಿದ್ದಾರೆ.

Recommended Video

ಹೇಳಿದ ಕೆಲಸವನ್ನು ಮೊದಲು ಮಾಡಿ ಎಂದ್ರು ಸುಧಾಕರ್ | Oneindia Kannada

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ ಹುಬ್ಬಳ್ಳಿ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊರೊನಾ ವಿಚಾರದಲ್ಲಿ ನಮಗೆ ಸುಮ್ಮನೆ ಹೆದರಿಸಿದ್ದಾರೆ. ಈ ಕೊರೊನಾ ಅಂಥ ವೈರಾಣು ಏನಲ್ಲ. ತಪ್ಪು ತಿಳಿದುಕೊಳ್ಳಬೇಡಿ ತಮಾಷೆಗೆ ಹೇಳುತ್ತಿರುವೆ ಎಂದರು.

ರಾಜಕೀಯ ಚರ್ಚೆಗೆ ಗ್ರಾಸವಾದ 'ಕೊರೊನಾ ಮಾತ್ರೆ'; ಹೇಳಿಕೆ ಕೊಟ್ಟು ಪೇಚಿಗೆ ಸಿಲುಕಿದ ಸೈಲ್?ರಾಜಕೀಯ ಚರ್ಚೆಗೆ ಗ್ರಾಸವಾದ 'ಕೊರೊನಾ ಮಾತ್ರೆ'; ಹೇಳಿಕೆ ಕೊಟ್ಟು ಪೇಚಿಗೆ ಸಿಲುಕಿದ ಸೈಲ್?

ಎಲ್ಲರನ್ನು ನೋಡಿದಾಗ ನನಗೆ ತುಂಬಾ ರಾಮಾಯಣ ನೆನಪಾಗುತ್ತೆ, ಮಾಸ್ಕ್ ಹಾಕಿಕೊಂಡವರನ್ನು ಸಂಸದ ಅನಂತಕುಮಾರ್ ಹೆಗಡೆ ಕಪಿಗಳಿಗೆ ಹೋಲಿಸಿದ್ದಾರೆ. ಮಾತು ಮುಂದುವರೆಸಿ, ಕೊರೊನಾ ಬಗ್ಗೆ ಜಾಸ್ತಿ ಹೆದರಬೇಕಿಲ್ಲ. ಅದರ ಜೊತೆಯೇ ಜೀವನ ಮಾಡಬೇಕಿದೆ ಎಂದು ಹೇಳಿದರು.

Ananth Kumar Hegde Controversial Comment On People Wearing Face Mask

ಕೊರೊನಾ ಭ್ರಮೆಯಲ್ಲಿ ಬದುಕುವುದು ಬೇಡ. ನೆಗಡಿ, ಕೆಮ್ಮು ಜ್ವರದಂತೆ ಕೊರೊನಾ ಕೂಡ ಒಂದು ರೋಗ. ಕೊರೊನಾ ವೈರಸ್ ಗೆ ಹೆದರಿದರೆ ದೇಶ ಆರ್ಥಿಕವಾಗಿ ದಿವಾಳಿ ಆಗುತ್ತದೆ ಎಂದರು. ಸಂಸದರ ಭಾಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.

English summary
Uttara Kannada MP Anant Kumar Hegde has once again stepped into the controversy by saying, "I remembered Ramayana if I saw the mask wearer."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X