ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇತುವೆ ಮೇಲಿಂದ ನದಿಗೆ ಬಿದ್ದ ಟ್ರ್ಯಾಕ್ಟರ್; ಏಳು ರೈತರ ಸಾವು

|
Google Oneindia Kannada News

ಬೆಳಗಾವಿ, ಫೆಬ್ರವರಿ 8: ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ನದಿಗೆ ಟ್ರ್ಯಾಕ್ಟರ್ ಬಿದ್ದು 7 ರೈತರು ದುರ್ಮರಣ ಹೊಂದಿರುವ ಘಟನೆ ಖಾನಾಪುರ ತಾಲೂಕಿನ ಇಟಗಿ ಬಳಿ ಶನಿವಾರ ಬೆಳಿಗ್ಗೆ ಸಂಭವಿಸಿದೆ.

ಇಟಗಿ- ಬೋಗೂರ ಗ್ರಾಮದ ಮಧ್ಯದ ಸೇತುವೆ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದು, ಆಸ್ಪತ್ರೆಗೆ ದಾಖಲಿಸುವಾಗ ಮೂವರು ರೈತರು ಮೃತಪಟ್ಟಿದ್ದಾರೆ.

 ಕೂಡ್ಲಿಗೆ; ಸಾವಿಗೆ ಹೊರಟವರೇ ಅಪಘಾತದಲ್ಲಿ ಹೆಣವಾಗಿಬಿಟ್ಟರು ಕೂಡ್ಲಿಗೆ; ಸಾವಿಗೆ ಹೊರಟವರೇ ಅಪಘಾತದಲ್ಲಿ ಹೆಣವಾಗಿಬಿಟ್ಟರು

ಬೋಗೂರು ಗ್ರಾಮದ ಶೇಖಪ್ಪ ಕೇದಾರಿ(38), ಗುಲಾಬಿ ಹುಣಸಿಕಟ್ಟಿ(35) ಶಾಂತವ್ವಾ ಅಳಗೋಡಿ(65), ಶಾಂತವ್ವಾ(63) ಮೃತ ದುರ್ದೈವಿಗಳು. ಇನ್ನೂ ಮೂವರು ಮೃತರ ಹೆಸರು ತಿಳಿದುಬಂದಿಲ್ಲ. 7 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಗಾಯಾಳುಗಳನ್ನು ಖಾನಾಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

Accident Near Belagavi District Khanapur ; 7 Farmers Dead

ಮೃತರೆಲ್ಲರೂ ಬೋಗೂರು ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ. ಬೋಗೂರ ಗ್ರಾಮದಿಂದ ಇಟಗಿ ಗ್ರಾಮದ ಕಬ್ಬಿನ ಹೊಲಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Accident Near Belagavi District Khanapur ; 7 Farmers Dead. another 7 farmers injured and hospitalized.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X