ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗ್ರಾಮ ಸ್ವರಾಜ್ಯ-ಧಾರ್ಮಿಕ ಸಹಿಷ್ಣುತೆಗೆ 'ಯುವಕರೇ ಸತ್ಯಾಗ್ರಹ ಮಾಡಿ'

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 25: ಮಹಾತ್ಮಾ ಗಾಂಧೀಜಿಯವರು 150ನೇ ಜನ್ಮ ವರ್ಷಾಚರಣೆ ಅಂಗವಾಗಿ ಗ್ರಾಮ ಸೇವಾ ಸಂಘ ವಿನೂತನ ರೀತಿಯಲ್ಲಿ 'ಯುವಕರೇ ಸತ್ಯಾಗ್ರಹ ಮಾಡಿ' ಅಭಿಯಾನವನ್ನು ಅ.6 ರಂದು ಹಮ್ಮಿಕೊಂಡಿದೆ.

ಬೆಳಗ್ಗೆ 6 ರಿಂದ ಸಂಜೆ 4 ಗಂಟೆಯ ಒಳಗೆ 7 ತಾಸುಗಳ ಕಾಲ ವಿಶಿಷ್ಟ ಸತ್ಯಾಗ್ರಹ ಕಾರ್ಯಕ್ರಮವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.

ಸತ್ಯಾಗ್ರಹವೆಂದರೆ ಕೇವಲ ಹಳೆಯ ಸತ್ಯಾಗ್ರವನ್ನು ಸ್ಮರಿಸಿ ಹೊಗಳುವುದಲ್ಲ ಬದಲಾಗಿ ಇಂದಿನ ಅಗತ್ಯತೆಗೆ ಅನುಗುಣವಾಗಿ ಯುವಕರನ್ನು ಒಳಗೊಂಡು ಹಮ್ಮಿಕೊಳ್ಳುವ ಆಚರಣೆ ರೀತಿ ಸತ್ಯಾಗ್ರಹವನ್ನು ನಡೆಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಮಹಾತ್ಮಾ ಗಾಂಧೀಜಿಗೆ ಸರಳಾ ದೇವಿಯೊಂದಿಗಿತ್ತು ಪ್ರೇಮ ಸಂಬಂಧ! ಮಹಾತ್ಮಾ ಗಾಂಧೀಜಿಗೆ ಸರಳಾ ದೇವಿಯೊಂದಿಗಿತ್ತು ಪ್ರೇಮ ಸಂಬಂಧ!

ಗ್ರಾಮ ಸ್ವರಾಜ್ಯ ಹಾಗೂ ದೇಶದಲ್ಲಿ ಧಾರ್ಮಿಕ ಸಹಿಷ್ಣುತೆ ಹೆಚ್ಚಿಸುವ ನಿಟ್ಟಿನಲ್ಲಿ ಈ ಸತ್ಯಾಗ್ರಹ ಏರ್ಪಡಿಸಲಾಗಿದೆ. 7 ತಾಸುಗಳ ಕಾಲ ನಡೆಯುವ ಈ ಸತ್ಯಾಗ್ರಹದಲ್ಲಿ ಕೇವಲ ಏಳು ತಾಸುಗಳ ಉಪವಾಸ ಮಾತ್ರವಲ್ಲದೆ ಕೈಮಗ್ಗ ವಸ್ತುಗಳ ಪ್ರದರ್ಶನ, ಮಾರಾಟ, ವಿವಿಧ ಕಲಾವಿದರಿಂದ ನೃತ್ಯ, ಹಾಡು ಮತ್ತಿತರೆ ದೇಶಭಕ್ತಿ ಉದ್ಧೀಪನಗೊಳಿಸುವ ಗಾಯನವೂ ನಡೆಯಲಿದೆ.

Youth, Satyagraha Maadi, a unique fun and fasting in Bengaluru

ಸ್ವಾತಂತ್ರ್ಯ ದಿನ ಸಂಭ್ರಮದಲ್ಲಿ ಗಾಂಧೀಜಿ ಗೈರಾಗಿದ್ದರು, ಯಾಕೆ ಗೊತ್ತಾ?ಸ್ವಾತಂತ್ರ್ಯ ದಿನ ಸಂಭ್ರಮದಲ್ಲಿ ಗಾಂಧೀಜಿ ಗೈರಾಗಿದ್ದರು, ಯಾಕೆ ಗೊತ್ತಾ?

ಯುವಕರೇ ಸತ್ಯಾಗ್ರಹ ಮಾಡಿ ಎನ್ನುವ ಕಾರ್ಯಕ್ರಮದಲ್ಲಿ ಹಲವಾರು ಪ್ರಸಿದ್ಧ ಕಲಾವಿದರು ಕೂಡ ಪಾಲ್ಗೊಂಡು ಹಾಡುವುದು ಮತ್ತು ನೃತ್ಯ ಮಾಡುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಭಾಗವಹಿಸಲು ಇಚ್ಛಿಸುವ ಯುಕವಕರು ಗ್ರಾಮ ಸ್ವರಾಜ್ಯ ಸೇವಾ ಸಂಘವನ್ನು ಸಂಪರ್ಕಿಸಬಹುದಾಗಿದೆ.

English summary
Gram seva sangha is organising Youth, Satyagraha Maadi, seven hour's fasting on October 6 at Ravindra Kalakshetra in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X