ಮೋದಿಗಾಗಿ ಅಷ್ಟ ರಾಜ್ಯಗಳಿಗೆ ಜಾಥಾ ಹೊರಟ ತಮಿಳುನಾಡು ಯುವತಿ
ಬೆಂಗಳೂರು, ಜನವರಿ 15: ಮೋದಿ ಗೆಲುವಿಗಾಗಿ ತಮಿಳುನಾಡಿನ ಯುವತಿಯೊಬ್ಬಳು ಅಷ್ಟರಾಜ್ಯಗಳ ಬುಲೆಟ್ ಜಾಥಾ ಕೈಗೊಂಡಿದ್ದಾರೆ.
ರಾಜಲಕ್ಷ್ಮೀ ಅವರು ತಮಿಳುನಾಡು ವಾಸಿಯಾದರೂ ರಾಯಚೂರು ಮೂಲದವರು , ಬಿಜೆಪಿ ಕಾರ್ಯಕರ್ತರಲ್ಲದಿದ್ದರೂ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸಲು ಬುಲೆಟ್ ಜಾಥಾ ಆರಂಭಿಸಿದ್ದಾರೆ.
ಜಾಥಾ ಮಂಗಳವಾರ ಟೌನ್ಹಾಲ್ ಮುಂಭಾಗದಿಂದ ಆರಂಭಿಸಲಾಯಿತು, ಕರ್ನಾಟಕ, ಗೋವಾ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ದೆಹಲಿ ರಾಜ್ಯಗಳಲ್ಲಿ ಒಟ್ಟು 15,225 ಕಿ.ಮೀ ಜಾಥಾ ಕೈಗೊಂಡಿದ್ದಾರೆ.
ನಾರಿ ಶಕ್ತಿಯ ಪರಿಚಯ ಮಾಡುವುದರ ಜೊತೆಗೆ ಸ್ಥಳೀಯ ಭಾಷೆಗಳಲ್ಲಿ ಮಾತನಾಡಿ ಮೋದಿ ಅಪ್ಲಿಕೇಷನ್ ಬಳಕೆಯ ಬಗ್ಗೆ ಪರಿಚಯವನ್ನೂ ಮಾಡಿಕೊಡಲಿದ್ದಾರೆ. 8 ಟನ್ ಭಾರತ ಮಿನಿ ಟ್ರಕ್ನ್ನು ಸ್ವತಃ ಮಹಿಳೆರು ಅಬಲೆಯರಲ್ಲ ಎನ್ನುವ ಸಂದೇಶವನ್ನು ಸಾರಲಿದ್ದಾರೆ.
ರಾಜಲಕ್ಷ್ಮೀ ಅವರೊಂದಿಗೆ 25 ಜನರ ತಂಡ ವಾಹನಗಳಲ್ಲಿ ಸಾಗಲಿದೆ. ಈಗ ರಾಮನಗರದತ್ತ ಸಾಗುತ್ತಿದ್ದು, ಮಂಡ್ಯ ಮಾರ್ಗವಾಗಿ ಮೈಸೂರು ತಲುಪಿಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.