ಯಡಿಯೂರಪ್ಪ ಕರ್ನಾಟಕದ ಮುಂದಿನ ಸಿಎಂ: ವಿ ಸೋಮಣ್ಣ
ಬೆಂಗಳೂರು, ಮೇ 31: ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧೆಗಿಳಿದಿರುವ ಮಾಜಿ ಸಚಿವ ವಿ. ಸೋಮಣ್ಣ ಅವರು ಮಂಗಳವಾರ ಮಧ್ಯಾಹ್ನ ನಾಮಪತ್ರ ಸಲ್ಲಿಸಿದರು. ಜೊತೆಗೆ ಕರ್ನಾಟಕದಿಂದ ರಾಜ್ಯಸಭಾಗೆ ನಾಮಾಂಕಿತವಾಗಿರುವ ನಿರ್ಮಲಾ ಸೀತಾರಾಮನ್ ಅವರು ಕೂಡಾ ನಾಮಪತ್ರ ಸಲ್ಲಿಸಿದರು.
ಸೋಮವಾರದಂದು
ಸಿದ್ದಗಂಗಾ
ಮಠಕ್ಕೆ
ಭೇಟಿ
ನೀಡಿ
ಶ್ರೀಗಳ
ಆಶೀರ್ವಾದ
ಪಡೆದುಕೊಂಡು
ಬಂದಿರುವ
ವಿ
ಸೋಮಣ್ಣ
ಅವರು
ಮಾತನಾಡಿ,
ಮುಂಬರುವ
ಚುನಾವಣೆಗಳನ್ನು
ಹಿರಿಯ
ನಾಯಕ
ಬಿ.ಎಸ್.ಯಡಿಯೂರಪ್ಪ
ಅವರ
ನೇತೃತ್ವದಲ್ಲಿ
ಯಶಸ್ವಿಯಾಗಿ
ಎದುರಿಸುತ್ತೇವೆ.
ಯಡಿಯೂರಪ್ಪ
ಅವರು
ಕರ್ನಾಟಕದ
ಮುಂದಿನ
ಸಿಎಂ
ಎಂದು
ಘೋಷಿಸಿದರು.
ಯಡಿಯೂರಪ್ಪ
ಅವರಿಗೆ
ಪಕ್ಷದ
ಮುಖಂಡರಾದ
ಅನಂತ
ಕುಮಾರ್,
ಜಗದೀಶ
ಶೆಟ್ಟರ್,
ಸದಾನಂದ
ಗೌಡ,
ಆರ್.
ಅಶೋಕ್
ಸೇರಿದಂತೆ
ಇತರರು
ಸಾಥ್
ನೀಡಲಿದ್ದಾರೆ
ಎಂದರು.
ರಾಜ್ಯದಿಂದ
ಆಯ್ಕೆಯಾಗಿದ್ದ
ಕೇಂದ್ರ
ಪ್ರಭಾವಿ
ಸಚಿವ
ಎಂ.
ವೆಂಕಯ್ಯ
ನಾಯ್ಡು
ತಮ್ಮ
ಅನುಭವಗಳನ್ನು
ಈ
ಸಾರಿ
ರಾಜಸ್ಥಾನದಲ್ಲಿ
ಧಾರೆ
ಎರೆಯಲಿದ್ದಾರೆ.
ತಮಿಳುನಾಡು
ಮೂಲದ
ನಿರ್ಮಲಾ
ಸೀತಾರಾಮನ್
ಅವರನ್ನು
ಕರ್ನಾಟಕ
ಅಭ್ಯರ್ಥಿಯನ್ನಾಗಿ
ಆಯ್ಕೆ
ಮಾಡಲಾಗಿದ್ದು,
ಮುಂದಿನ
ದಿನಗಳಲ್ಲಿ
ರಾಜ್ಯದ
ಅಭಿವೃದ್ಧಿಗೆ
ಶ್ರಮಿಸಲಿದ್ದಾರೆ
ಎಂದು
ಪಕ್ಷದ
ನಿರ್ಧಾರವನ್ನು
ಸಮರ್ಥಿಸಿಕೊಂಡರು.
Hon'ble Minister of State, @nsitharaman's Nomination for Rajyasabha filed at Bengaluru today. pic.twitter.com/59OY4nG7rA
— B.S. Yeddyurappa (@BSYBJP) May 31, 2016
ವಿಧಾನಸಭೆ ಕಾರ್ಯದರ್ಶಿ ಹಾಗೂ ರಾಜ್ಯಸಭೆ ಚುನಾವಣಾಧಿಕಾರಿ ಎಸ್ ಮೂರ್ತಿ ಅವರಿಗೆ ನಾಮಪತ್ರ ಸಲ್ಲಿಸುವಾಗ ವಿ ಸೋಮಣ್ಣ ಅವರ ಅಕ್ಕ ಪಕ್ಕದಲ್ಲಿ ಬಿಎಸ್ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತ್ ಕುಮಾರ್, ಮಾಜಿ ಸಚಿವರಾದ ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ ಮುಂತಾದ ನಾಯಕರು ಜೊತೆಯಲ್ಲಿದ್ದರು.