ಬೆಳಕಿನ ಮೇಲೆ ಬೆಳಕು ಚೆಲ್ಲೋಣ: ಅರಿಮೆ ಮಾತುಕತೆ
ಬೆಂಗಳೂರು, ಡಿಸೆಂಬರ್ 06 : ಲೇಖಕ ವಸಂತ್ ಶೆಟ್ಟಿ ಅವರ ಮುನ್ನೋಟ ಮಳಿಗೆಯಲ್ಲಿ 'ಬೆಳಕಿನ ಮೇಲೆ ಬೆಳಕು ಚೆಲ್ಲೋಣ' ಎನ್ನುವ ಅರಿಮೆ ಕಾರ್ಯಕ್ರಮವನ್ನು ಡಿಸೆಂಬರ್ 10 ರಂದು ಭಾನುವಾರ ಆಯೋಜಿಸಿದೆ.
ನಮ್ಮ ರಾಷ್ಟ್ರಕೂಟರ ಇತಿಹಾಸ ನಿಮಗೆಷ್ಟು ಗೊತ್ತು?
ಮುನ್ನೋಟ ಮಳಿಗೆಯು ಪ್ರತಿ ಭಾನುವಾರ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ. ವಿಜ್ಞಾನ ಪ್ರಾಧ್ಯಾಪಕರಾದ ಸೂರ್ಯಪ್ರಕಾಶ್ ಜೆ. ಅವರು ಮೂರನೇ ಬಾರಿಗೆ ಮುನ್ನೋಟ ಕಾರ್ಯಕ್ರಮದಲ್ಲಿ ವಿಷಯ ಮಂಡನೆ ಮಾಡಲಿದ್ದಾರೆ. ಈ ಹಿಂದೆ ಗುರುತ್ವ ಮತ್ತು ನ್ಯಾನೋ ತಂತ್ರಜ್ಞಾನದ ಕುರಿತು ಮಾಹಿತಿ ನೀಡಿದ್ದರು.
ಇದೀಗ ಕನ್ನಡದಲ್ಲೇ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದ ಮೇಲೆ ಮಾತನಾಡಲಿದ್ದು, ಟೆಲಿಸ್ಕೋಪ್ ಬಳಸಿ ದೂರದ ವಸ್ತುಗಳನ್ನು ನಾವು ನೋಡುವುದು ಹೇಗೆ, ಮೈಕ್ರೋಸ್ಕೋಪ್, ಕಿರು ರಚನೆಗಳನ್ನು ಹೇಗೆ ತೋರಿಸಬಹುದು. ಕನ್ನಡಕ, ಲೆನ್ಸ್ ಲೇಸರ್ ಇವುಗಳ ಹಿಂದಿರುವ ವಿಜ್ಞಾನ, ಕ್ಯಾಮೆರಾ ಚಿತ್ರಗಳನ್ನು ಹೇರೆ ಸೆರೆಹಿಡಿಯಬಹುದು, ಬೆಳಕಿನ ಬಳಕೆಯ ಸುತ್ತಲಿರುವ ಇಂತಹ ಹತ್ತಾರು ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ.
ಏನು-ಬೆಳಕಿನ ಮೇಲೆ ಬೆಳಕು ಚೆಲ್ಲೋಣ ಕಾರ್ಯಕ್ರಮ
ಎಲ್ಲಿ-ಮುನ್ನೋಟ, ನಂ.67, ಸೌತ್ ಅವೆನ್ಯೂ ಕಾಂಪ್ಲೆಕ್ಸ್, ಡಿವಿಜಿ ರಸ್ತೆ, ನಾಗಸಂದ್ರ ಸರ್ಕಲ್ ಬಳಿ, ಬಸವನಗುಡಿ
ಯಾವಾಗ-ಡಿಸೆಂಬರ್ 10 ಭಾನುವಾರ ಬೆಳಗ್ಗೆ 11.30