ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟೆಕ್ಕಿ ಕುಮಾರ್ ಅಜಿತಾಬ್ ನಾಪತ್ತೆ, ಸಿಬಿಐ ಮುಂದಿದೆ ಸವಾಲು

|
Google Oneindia Kannada News

ಬೆಂಗಳೂರು, ಡಿಸೆಂಬರ್ 06 : ಎಫ್‌ಐಆರ್ ದಾಖಲು ಮಾಡಿಕೊಂಡು ಟೆಕ್ಕಿ ಕುಮಾರ್ ಅಜಿತಾಬ್ ನಾಪತ್ತೆ ಪ್ರಕರಣದ ತನಿಖೆಯನ್ನು ಸಿಬಿಐ ಆರಂಭಿಸಿದೆ. 2017ರ ಡಿಸೆಂಬರ್‌ನಿಂದ ಟೆಕ್ಕಿ ನಾಪತ್ತೆಯಾಗಿದ್ದಾರೆ.

ಕರ್ನಾಟಕ ಹೈಕೋರ್ಟ್ ಆದೇಶದಂತೆ ಸಿಐಡಿ ಕುಮಾರ್ ಅಜಿತಾಬ್ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರ ಮಾಡಿದೆ. ಎಸ್‌ಐಟಿ ಮತ್ತು ಸಿಐಡಿ ಒಂದು ವರ್ಷಗಳ ಕಾಲ ತನಿಖೆ ನಡೆಸಿದರೂ ಟೆಕ್ಕಿ ನಾಪತ್ತೆ ಪ್ರಕರಣ ಚಿದಂಬರ ರಹಸ್ಯವಾಗಿ ಉಳಿದಿದೆ.

ಬೆಂಗಳೂರು ಟೆಕ್ಕಿ ಅಜಿತಾಬ್ ನಾಪತ್ತೆ ಪ್ರಕರಣ, ಸಿಬಿಐನಲ್ಲಿ ಎಫ್‌ಐಆರ್‌ಬೆಂಗಳೂರು ಟೆಕ್ಕಿ ಅಜಿತಾಬ್ ನಾಪತ್ತೆ ಪ್ರಕರಣ, ಸಿಬಿಐನಲ್ಲಿ ಎಫ್‌ಐಆರ್‌

ಕುಮಾರ್ ಅಜಿತಾಬ್ ತಂದೆ ಅಶೋಕ್ ಕುಮಾರ್ ಸಿನ್ಹಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್‌ ಸಿಬಿಐ ತನಿಖೆಗೆ ಆದೇಶ ನೀಡಿತ್ತು. ಸಿಐಡಿ ಪೊಲೀಸರು 1000 ಪುಟಗಳ ತನಿಖಾ ವರದಿಯನ್ನು ಸಿಬಿಐಗೆ ಹಸ್ತಾಂತರ ಮಾಡಿದ್ದಾರೆ.

ಟೆಕ್ಕಿ ಅಜಿತಾಬ್ ನಾಪತ್ತೆ ಪ್ರಕರಣ ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶಟೆಕ್ಕಿ ಅಜಿತಾಬ್ ನಾಪತ್ತೆ ಪ್ರಕರಣ ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ

ಅಜಿತಾಬ್ ಓಎಲ್‌ಎಕ್ಸ್‌ನಲ್ಲಿ ಕಾರು ಮಾರಾಟಕ್ಕೆ ಇಟ್ಟಿದ್ದರು. ಕಾರು ನೋಡಲು ಕರೆ ಮಾಡಿದ ವ್ಯಕ್ತಿ ಜೊತೆ ಕೊನೆಯದಾಗಿ ಅವರು ಮಾತನಾಡಿದ್ದರು. ಬಳಿಕ ಅವರ ಮೊಬೈಲ್ ಸ್ವಿಚ್‌ ಆಫ್‌ ಆಗಿದ್ದು, ಅವರು ಸಹ ನಾಪತ್ತೆಯಾಗಿದ್ದಾರೆ.

ಬೆಂಗಳೂರು ಟೆಕ್ಕಿ ನಿಗೂಢ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವುಬೆಂಗಳೂರು ಟೆಕ್ಕಿ ನಿಗೂಢ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು

1.45 ಲಕ್ಷ ಫೋನ್ ನಂಬರ್

1.45 ಲಕ್ಷ ಫೋನ್ ನಂಬರ್

ಟೆಕ್ಕಿ ಕುಮಾರ್ ಅಜಿತಾಬ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಟ್ ಫೀಲ್ಡ್‌ ಪೊಲೀಸರು ಎಸ್ಐಟಿ ರಚನೆ ಮಾಡಿದ್ದರು. ನಂತರ ತನಿಖೆಯನ್ನು ಸಿಐಡಿಗೆ ಹಸ್ತಾಂತರ ಮಾಡಲಾಯಿತು. ತನಿಖೆಯ ವೇಳೆ ಇಬ್ಬರೂ ಸೇರಿ ಸುಮಾರು 1.45 ಲಕ್ಷ ಫೋನ್ ಸಂಖ್ಯೆಗಳ ಬಗ್ಗೆ ತನಿಖೆ ನಡೆಸಿದ್ದಾರೆ. ಆದರೆ, ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಕೋಲಾರದಲ್ಲಿ ಸಿಮ್ ಖರೀದಿ

ಕೋಲಾರದಲ್ಲಿ ಸಿಮ್ ಖರೀದಿ

ತನಿಖೆ ನಡೆಸಿದ ಪೊಲೀಸರಿಗೆ ಕೋಲಾರದಲ್ಲಿ ಸಿಮ್ ಕಾರ್ಡ್ ಖರೀದಿ ಮಾಡಿದ ಮಾಹಿತಿ ಲಭ್ಯವಾಗಿತ್ತು. ತನಿಖೆ ನಡೆಸಿದಾಗ ತಿಂಗಳ ಹಿಂದೆ ವ್ಯಕ್ತಿಯೊಬ್ಬ ಸಿಮ್ ಖರೀದಿ ಮಾಡಿದ್ದ. ಆದರೆ, ನೀಡಿದ್ದ ದಾಖಲೆಗಳು ನಕಲಿಯಾಗಿದ್ದವು. ಕೋಲಾರದಲ್ಲಿ ಖರೀದಿ ಮಾಡಿದ್ದ ಸಿಮ್‌ನಿಂದ ಅಜಿತಾಬ್‌ಗೆ ಕೊನೆಯದಾಗಿ ಕರೆ ಬಂದಿತ್ತು.

2 ಬಾರಿ ವಾಟ್ಸಪ್ ಕರೆ

2 ಬಾರಿ ವಾಟ್ಸಪ್ ಕರೆ

ಅನಾಮಧೇಯ ವ್ಯಕ್ತಿ ಮತ್ತು ಅಜಿತಾಬ್ ನಡುವೆ 2 ಬಾರಿ ವಾಟ್ಸಪ್ ಕರೆ ಮೂಲಕ ಸಂಭಾಷಣೆ ನಡೆದಿತ್ತು ಎಂಬ ಮಾಹಿತಿಯನ್ನು ಸಿಐಡಿ ಕಲೆ ಹಾಕಿತ್ತು. ಡಿಸೆಂಬರ್ 17ರ ರಾತ್ರಿ 7.30ಕ್ಕೆ ಕೊನೆಯ ಕರೆ ಬಂದಿದೆ. ಬಳಿಕ ಆ ನಂಬರ್ ಸ್ವಿಚ್‌ ಆಫ್‌ ಆಗಿದೆ. ಅಜಿತಾಬ್ ನಾಪತ್ತೆಯಾಗಿದ್ದಾರೆ.

ಲಾರಿಯಲ್ಲಿ ಸಿಕ್ಕ ಫೋನ್

ಲಾರಿಯಲ್ಲಿ ಸಿಕ್ಕ ಫೋನ್

ಅಜಿತಾಬ್‌ಗೆ ಕರೆ ಮಾಡಿದ ವ್ಯಕ್ತಿಯ ಲೋಕೇಷನ್ ಪತ್ತೆ ಹಚ್ಚಿದ ಪೊಲೀಸರಿಗೆ ಹೆಬ್ಬಾಳದಲ್ಲಿ ಕೊನೆಯದಾಗಿ ಲೋಕೇಷನ್ ಪತ್ತೆಯಾಗಿತ್ತು. ಪೋನ್ ಸ್ವಿಚ್‌ ಆಫ್‌ ಮಾಡಿ ಲಾರಿ ಮೇಲೆ ಎಸೆಯಲಾಗಿತ್ತು. ಲಾರಿ ಚಾಲಕನನ್ನು ವಿಚಾರಣೆ ನಡೆಸಿದಾಗ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಈಗ ಸಿಬಿಐ ಪ್ರಕರಣವನ್ನು ಬಯಲು ಮಾಡಲಿದೆಯೇ?.

ಕಾರು ಮಾರಾಟಕ್ಕೆ ಇಟ್ಟಿದ್ದರು

ಕಾರು ಮಾರಾಟಕ್ಕೆ ಇಟ್ಟಿದ್ದರು

ಪಾಟ್ನಾ ಮೂಲದ ಅಜಿತಾಬ್ ಕುಮಾರ್ ವೈಟ್‌ಫೀಲ್ಡ್‌ನ ಬ್ರಿಟಿಷ್ ಟೆಲಿಕಾಂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಓಎಲ್‌ಎಕ್ಸ್‌ನಲ್ಲಿ ತಮ್ಮ ಮಾರುತಿ ಸಿಯಾಜ್ ಕಾರು ಮಾರಾಟಕ್ಕೆ ಇಟ್ಟಿದ್ದರು. ಓಎಲ್‌ಎಕ್ಸ್‌ನಲ್ಲಿ ಜಾಹೀರಾತು ನೀಡಿದ ಮರುದಿನವೇ ಅನಾಮಧೇಯ ವ್ಯಕ್ತಿಯಿಂದ ಕರೆ ಬಂದಿತ್ತು. ಕಾರು ತೋರಿಸಲು ಅವರು ಹೋಗಿದ್ದರು.

English summary
After Karnataka High Court order CID handover the Techie Ajitab missing case to Central Bureau of Investigation. Will CBI crack the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X