ವಿಬ್ಗಯಾರ್ ಶಾಲೆ ಆರಂಭ, ಕುಣಿಯುತ ಬಂದ ಮಕ್ಕಳು
ಬೆಂಗಳೂರು, ಜು. 28 : ಬೆಂಗಳೂರಿನ ಹೊರವಲಯದ ಮಾರತ್ ಹಳ್ಳಿಯ ವಿಬ್ ಗಯಾರ್ ಶಾಲೆ ಸೋಮವಾರದಿಂದ ಪುನರಾರಂಭವಾಗಿದೆ. ಒಂದನೇ ತರಗತಿ ವಿದ್ಯಾರ್ಥಿನಿ ಮೇಲೆ ಶಿಕ್ಷಕನಿಂದ ಅತ್ಯಾಚಾರ ನಡೆದ ಪ್ರಕರಣ ಬೆಳಕಿಗೆ ಬಂದ ನಂತರ ವಿಬ್ ಗಯಾರ್ ಶಾಲೆಯನ್ನು ಮುಚ್ಚಲಾಗಿತ್ತು.
ಶಿಕ್ಷಣ
ಇಲಾಖೆ,
ಪೋಷಕರು
ಮತ್ತು
ಶಾಲೆಯ
ಆಡಳಿತ
ಮಂಡಳಿ
ನಡುವೆ
ಹಲವು
ಸುತ್ತಿನ
ಮಾತುಕತೆ
ನಡೆದ
ಬಳಿಕ
ಶಾಲೆಯನ್ನು
ಪುನಃ
ಆರಂಭಿಸಲಾಗಿದೆ.
ಸುಮಾರು
12
ದಿನಗಳ
ಬಳಿಕ
ಪೋಷಕರು
ಸೋಮವಾರ
ಬೆಳಗ್ಗೆ
ಮಕ್ಕಳನ್ನು
ಶಾಲೆಗೆ
ತಂದು
ಬಿಟ್ಟು
ಹೋಗುತ್ತಿದ್ದಾರೆ.
ಮಕ್ಕಳ ಸುರಕ್ಷತೆ ದೃಷ್ಠಿಯಿಂದ ಶಾಲಾ ಆಡಳಿತ ಮಂಡಳಿ ಶಾಲೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದೆ. ಪೊಲೀಸರ ನಿರ್ದೇಶನದಂತೆ ಹಲವು ಸ್ಥಳಗಳಲ್ಲಿ ಸಿಸಿಟಿವಿ ಆಳವಡಿಸಲಾಗಿದೆ. ಶಾಲೆಯಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಕೇಟಿಂಗ್ ತರಬೇತುದಾರ ಮುಸ್ತಾಫನನ್ನು ಪೊಲೀಸರು ಬಂಧಿಸಿದ್ದಾರೆ. [ವಿಬ್ ಗಯಾರ್ ಶಾಲೆಯ ಸಂಸ್ಥಾಪಕನ ಬಂಧನ]
ಕಳೆದ ವಾರ ಪೋಷಕರೊಂದಿಗೆ ಮಾತುಕತೆ ನಡೆಸಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಮಕ್ಕಳ ಶಿಕ್ಷಣದ ಹಿತದೃಷ್ಠಿಯಿಂದ ಶಾಲೆಯನ್ನು ಪುನಃ ಆರಂಭಿಸುವಂತೆ ಆಡಳಿತ ಮಂಡಳಿಗೆ ಸೂಚನೆ ನೀಡಿದ್ದರು. ಶುಕ್ರವಾರ ಶಾಲೆ ಆರಂಭವಾಗಬೇಕಿತ್ತು. ಆದರೆ, ಆಡಳಿತ ಮಂಡಳಿ ಮತ್ತು ಪೋಷಕರ ನಡುವೆ ಸರಣಿ ಸಭೆಗಳು ನಡೆದ ನಂತರ ಸೋಮವಾರ ಶಾಲೆ ಆರಂಭವಾಗಿದೆ. [ವಿಬ್ ಗಯಾರ್ ಮುಂದಿನ ಪ್ರತಿಭಟನೆ ಚಿತ್ರಗಳು]