ಗಗನಕ್ಕೇರಿದ್ದ ತರಕಾರಿ ಬೆಲೆಗಳಲ್ಲಿ ಕೊಂಚ ಇಳಿಕೆ
ಬೆಂಗಳೂರು, ನವೆಂಬರ್ 11 : ರಾಜ್ಯಾದೆಲ್ಲೆಡೆ ಕಳೆದ ಎರಡು ತಿಂಗಳಿನಲ್ಲಾದ ಅಕಾಲಿಕ ಮಳೆಯಿಂದಾಗಿ ಗಗನಕ್ಕೇರಿದ ತರಕಾರಿ ಬೆಲೆ ಈಗ ಇಳಿಯುತ್ತಿದೆ. ದಸರಾ ನಂತರ ಸತತವಾಗಿ ಬೆಲೆ ಏರಿಕೆ ಕಂಡು ತತ್ತರಿಸಿದ ಗ್ರಾಹರಿಕೆ ಸ್ವಲ್ಪ ಸಮಾಧಾನ ದೊರೆತಿದೆ.
ಅಕ್ಟೋಬರ್ ನಲ್ಲಿ ಬೀನ್ಸ್, ಕ್ಯಾಪ್ಸಿಕಮ್, ಕೋಸು, ಕ್ಯಾರೇಟ್ ಕೆಜಿಗೆ100 ಗಡಿ ದಾಟಿದ್ದವು. ಈಗ ಬದನೆ 69 ರೂ, ಟೊಮೆಟೊ ೬೦ರೂ.ಹೂಕೋಸು 51ರೂ, ಇದೆ. ಆದರೆ ಸೊಪ್ಪಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬಸಲೆಸೊಪ್ಪು ಒಂದು ಕಟ್ಟು 35ರೂ, ಕೊತ್ತಂಬಿ ಸೊಪ್ಪು ಒಂದು ಕಟ್ಟು 20ರೂ. ಮೆಂತ್ಯೆ, ಕರಿಬೇವು ಕಟ್ಟಿಗೆ ೫ರೂನಂತೆ ಮಾರಾಟವಾಗುತ್ತಿದೆ.
ನವೆಂಬರ್ ಮೊದಲ ವಾರದಲ್ಲಿ ತರಕಾರಿಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿತ್ತು. ಆದರೆ ಈ ಬಾರಿ ಚಿಂತಾಮಣಿ, ರಾಮನಗರಗಳಿಂದ ಹೆಚ್ಚಿನ ತರಕಾರಿ ಪೂರೈಕೆಯಾಗಿರುವುದರಿಂದ ಹಾಗೂ ರೈತರು ತರಕಾರಿಗಳನ್ನು ಮಾರುಕಟ್ಟೆಗೆ ತಂದಿರುವದರಿಂದ ಬೆಲೆಯಲ್ಲಿ ಸ್ವಲ್ಪ ಇಳಿಮುಖವಾಗಿದೆ.
ಆದರೆ
ಮಾರುಕಟ್ಟೆ
ಬೆಲೆ
ದರಕ್ಕಿಂತ
ಕಡಿಮೆ
ದರದಲ್ಲಿ
ತರಕಾರಿಗಳನ್ನು
ಒದಗಿಸುತ್ತಿದ್ದ
ಹಾಪ್ಕಾಮ್ಸ್
ಮಾರುಕಟ್ಟೆಗಿಂತ
ಹೆಚ್ಚಿನ
ದರದಲ್ಲಿ
ತರಕಾರಿಗಳನ್ನು
ಮಾರಾಟ
ಮಾಡುತ್ತಿದೆ.
ಹಾಪ್ಕಾಮ್ಸ್
ದರ
ತರಕಾರಿ
ಕೆಜಿಗಳಲ್ಲಿ
ಬೆಲೆಗಳಲ್ಲಿ
ಆಲೂಗಡ್ಡೆ
24ರೂ.
ಮೆಂತ್ಯೆ
93ರೂ
ಟೊಮೆಟೊ
60ರೂ
ಬೀನ್ಸ್
52ರೂ
ಬೀಟ್ರೋಟ್
60ರೂ.
ಬೆಂಡೆಕಾಯಿ
54ರೂ.
ಬಸಲೆಸೊಪ್ಪುಒಂದು
ಕಟ್ಟು
38ರೂ.
ಹೂಕೋಸು
46ರೂ.
ಕೆ.ಆರ್.
ಮಾರುಕಟ್ಟೆ
ದರ
ತರಕಾರಿ
ಕೆ.ಜಿ.ಗಳಲ್ಲಿ
ಬೆಲೆಗಳಲ್ಲಿ
ಆಲೂಗಡ್ಡೆ
20ರೂ.
ಬೀನ್ಸ್
60ರೂ.
ಬೆಂಡೆಕಾಯಿ
40ರೂ.
ಬೀಟ್ರೋಟ್
40ರೂ.
ಹೂಕೋಸು
60ರೂ.
ಬಸಲೆಸೊಪ್ಪು
25ರೂ
ನಂತೆ
ಮಾರಾಟವಾಗುತ್ತಿದೆ.