ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಧಾನಿ ಮಧ್ಯಸ್ಥಿಕೆವಹಿಸಿದರೆ ಬಂದ್ ಹಿಂದಕ್ಕೆ: ವಾಟಾಳ್ ನಾಗರಾಜ್

|
Google Oneindia Kannada News

ಬೆಂಗಳೂರು, ಜನವರಿ 31 : ಮಹಾದಾಯಿ, ಕಳಸಾ-ಬಂಡೂರಿ ನೀರಿನ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಿದರೆ ಫೆ.4 ರಂದು ಕರೆ ನೀಡಲಾಗಿದ್ದ ಬಂದ್ ಹಿಂಪಡೆಯಲಾಗುವುದು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಹೇಳಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವರಿ 25 ರಂದು ರಾಜ್ಯಾದ್ಯಂತ ಬಂದ್ ಮಾಡಲಾಗಿತ್ತು. ಆದರೆ ರೈತರ ಬೇಡಿಕೆ ಈಡೇರಿಲ್ಲ, ಫೆ.೩ರಂದು ಸಂಜೆಯವರೆಗೆ ಕಾಲಾವಕಾಶ ನೀಡಲಾಗುವುದು ಅಷ್ಟರೊಳಗೆ ಮೋದಿಯವರಿಂದ ಸಂದೇಶ ಬಂದರೆ ಬಂದ್ ಹಿಂಪಡೆಯಲಾಗುತ್ತದೆ. ಇಲ್ಲವಾದರೆ ಪ್ರತಿಭಟನೆ ಮುಂದುವರೆಯುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Vatal assures bandh withdrawn if PM intervenes

ಉತ್ತರ ಕರ್ನಾಟಕದ ಜನರ ನೋವನ್ನು ನೋಡಲು ಸಾಧ್ಯವಿಲ್ಲ, ಆದಷ್ಟು ಬೇಗ ನೀರಿನ ವಿವಾದ ಬಗೆಹರಿಯಬೇಕಿದೆ. ವಿವಾದ ಬಗೆ ಹರಿಯುವವರೆಗೂ ಪ್ರತಿಭಟನೆ ಮುಂದುವರೆಸುತ್ತೇವೆ. ನಮ್ಮನ್ನು ಜೈಲಿಗೆ ಹಾಕಿದರೂ ತೊಂದರೆಯಿಲ್ಲ ನಮ್ಮ ಹೋರಾಟವನ್ನು ಬಿಡುದಿಲ್ಲ.

English summary
Kannada activist Vatal Nagaraj has been assured that Bengaluru bandh will be withdrawn if Prime minister Narendra modi intervened to solve Mahadayi row.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X