ಜಯನಗರದಲ್ಲಿ ನಿಮಗೊಂದು ಸಂಗೀತ ರಸದೌತಣ ಕಾರ್ಯಕ್ರಮ
ಬೆಂಗಳೂರು, ಆಗಸ್ಟ್, 27 : ಉಸ್ತಾದ್ ಬಾಲೆ ಖಾನ್ ಸ್ಮರಣಾರ್ಥ ಸಂಸ್ಥೆಯು ಸಿತಾರ್ ವಾದಕ ನವಾಜ್ ಉಸ್ತಾದ್ ಬಾಲೆ ಖಾನ್ ಅವರ ನೆನಪಿನ ದ್ಯೋತಕವಾಗಿ ಸ್ಮರಣೆ ಎಂಬ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ.
ಸಂಗೀತ ಸಂಜೆ ಕಾರ್ಯಕ್ರಮವನ್ನು ಅನಿಸಾ ಖಾನ್ ಸೌದಾಗರ್ ಹಾಗೂ ತಬಲ ವಾದಕ ಶೈಲೇಸ್ ಶೆಣಯ್, ಹಾರ್ಮೋನಿಯಂ ವಾದಕಿ ಹರ್ಷದಾ ಅವರ ನೇತೃತ್ವದಲ್ಲಿ, ಆಗಸ್ಟ್ 29 ರ ಶನಿವಾರ ಸಂಜೆ 5.15 ಕ್ಕೆ ಜೆಎಸ್ಎಸ್ ಸಭಾಂಗಣ, 8ನೇ ಬ್ಲಾಕ್, ಜಯನಗರದಲ್ಲಿ ಹಮ್ಮಿಕೊಳ್ಳಲಾಗಿದೆ.[KIMA ಸಂಗೀತ ಪ್ರಶಸ್ತಿ: ನೆಚ್ಚಿನ ಕಲಾವಿದರಿಗೆ ಮತ ಹಾಕಿ]
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹಿಂದೂಸ್ತಾನಿ ಹಿರಿಯ ಕಲಾವಿದರಾದ ಪಂಡಿತ್ ಇಂಧುದರ್ ನೈರೋಡಿ ಆಗಮಿಸಲಿದ್ದು, ಹಿಂದೂಸ್ತಾನಿ ಗಾಯಕ ಡಾ. ಶಿವಾಲೀಶಾ ಸಿದ್ದಾವೀರ್ ಅವರ ಗಾಯನಕ್ಕೆ ತಬಲ ವಾದಕ ಭೀಮಾಶಂಕರ್ ಬಿದಾನೂರ್, ಹಾರ್ಮೋನಿಯಂ ಮೃಂತ್ಯುಜಯ ಎಚ್ ಸಹಕಾರ ನೀಡಲಿದ್ದಾರೆ.
ಕೊಳಲು ವಾದನವನ್ನು ಪಂಡಿತ್ ರಾಖೇಶ್ ಚೌರಾಸಿ ಅವರು ನಡೆಸಿಕೊಡಲಿದ್ದು, ತಬಲ ವಾದಕರಾದ ಪಂಡಿತ್ ರಾಜೇಂದ್ರ ನಾಕೋಡ್ ಇವರಿಗೆ ಸಾಥ್ ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಶಾರದಾ ಶ್ರೀನಿವಾಸನ್ 9880088455, ಚರಿತಾ ಕಲ್ಲೀಹಾಳ್ 9743118663, ಭೂಷಣ್ ಸೋನಾವಣೆ 7760721713 ಸಂಪರ್ಕಿಸಬಹುದು.