ಬೆಂಗಳೂರಿನ ಬಗ್ಗೆ ಪ್ರೀತಿ ಇದ್ದರೆ ಸೆಪ್ಟೆಂಬರ್ 29ಕ್ಕೆ ಸಭೆಗೆ ಬನ್ನಿ
ಬೆಂಗಳೂರು, ಸೆಪ್ಟೆಂಬರ್ 27: ಸಂಸದರು ಹಾಗೂ ಸಾವಿರದಿನ್ನೂರು ನಾಗರಿಕ ಹಿತರಕ್ಷಣಾ ಸಮಿತಿಗಳು ಒಟ್ಟಾಗಿ ಬೆಂಗಳೂರು ನಗರದ ಪ್ರಮುಖ ಸಮಸ್ಯೆಗಳ ಬಗ್ಗೆ ಒಟ್ಟಾಗಿ ಚರ್ಚೆ ನಡೆಸಲು ಒಂದು ವೇದಿಕೆ ಸಿದ್ಧವಾಗಿದೆ. ಇಂದಿರಾನಗರ ಕ್ಲಬ್ ನ ಕನ್ವೆನ್ಷನ್ ಹಾಲ್ ನಲ್ಲಿ ಸೆಪ್ಟೆಂಬರ್ 29ರಂದು ಬೆಳಗ್ಗೆ 10ಕ್ಕೆ ಯುನೈಟೆಡ್ ಬೆಂಗಳೂರು ಸಹಭಾಗಿತ್ವದಲ್ಲಿ ನಮ್ಮ ಬೆಂಗಳೂರು ಫೌಂಡೇಷನ್ ಸಭೆಯನ್ನು ಆಯೋಜಿಸಿದೆ.
ಸಾರ್ವಜನಿಕ ಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಉಪ ಮುಖ್ಯಮಂತ್ರಿ ಜತೆಗೆ ಚರ್ಚೆ ನಡೆಸಿ, ಕ್ರಮ ತೆಗೆದುಕೊಂಡಿದ್ದನ್ನು ಖಾತ್ರಿ ಪಡಿಸಿಕೊಳ್ಳಲು ಈ ಸಭೆ ಕರೆಯಲಾಗಿದೆ. ಡಾ.ಜಿ.ಪರಮೇಶ್ವರ ಅವರು ಸಾರ್ವಜನಿಕರ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸಬಹುದು ಎಂಬ ನಿರೀಕ್ಷೆ ಇದೆ.
* ವಸತಿ ಪ್ರದೇಶಗಳಲ್ಲಿ ವಿಪರೀತ ವಾಣಿಜ್ಯ ಚಟುವಟಿಕೆ ಹಾಗೂ ಕಾನೂನು ಜಾರಿಯಲ್ಲಿ ಆಗುತ್ತಿರುವ ಹಿನ್ನಡೆ
* ಪರಿಸರಕ್ಕೆ ಹಾನಿಯಾಗುವ ಮಾದರಿಯನ್ನು ಅಳವಡಿಸಿರುವುದರ ಬಗ್ಗೆ
ಬನ್ನೇರುಘಟ್ಟ ಉದ್ಯಾನ ಉಳಿವಿಗೆ ಸಂಸದ ರಾಜೀವ್ ಕೇಂದ್ರಕ್ಕೆ ಮೊರೆ
* ಅಸಮರ್ಪಕ ಕಸ ವಿಲೇವಾರಿಯಿಂದ ಬೆಂಗಳೂರಿನಲ್ಲಿ ಸಾರ್ವಜನಿಕರ ಆರೋಗ್ಯದ ಮೇಲೆ ಆಗುತ್ತಿರುವ ದುಷ್ಪರಿಣಾಮ
* ರಿಯಲ್ ಎಸ್ಟೇಟ್ ಕಾಯ್ದೆ ಸರಿಯಾಗಿ ಜಾರಿಗೆ ತರದೆ ಮನೆ ಖರೀದಿದಾರರ ಹಕ್ಕುಗಳ ಉಲ್ಲಂಘನೆಗೆ ಬಗ್ಗೆ
* ಬೆಂಗಳೂರು ಸುರಕ್ಷತೆಗೆ ಮತ್ತು ಹಳೆಯ ವೈಭವವನ್ನು ಮತ್ತೆ ಪಡೆಯುವುದಕ್ಕೆ ಕಾನೂನು ಮಾರ್ಗಗಳ ಬಗ್ಗೆ ನಾಗರಿಕರಿಗೆ ಇರುವ ಮಾಹಿತಿ ಕೊರತೆ ಬಗ್ಗೆ
ಮಕ್ಕಳ ಮೇಲಿನ ದೌರ್ಜನ್ಯ ತಡೆಯುವಂತೆ ಸಿಎಂಗೆ ರಾಜೀವ್ ಚಂದ್ರಶೇಖರ್ ಮನವಿ
ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಆ ಮೂಲಕ ಬೆಂಗಳೂರು ನಗರದ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ ತಡೆಯುವುದು ಉದ್ದೇಶವಾಗಿದೆ.