ಬೆಂಗಳೂರಿಗರ ಮೇಲೆ ಸಾರಿಗೆ ಉಪಕರ:ಅನಂತ ಕುಮಾರ್ ವಿರೋಧ
ಬೆಂಗಳೂರು, ಆಗಸ್ಟ್ 28: ಬೆಂಗಳೂರಿನ ಜನತೆ ಮೇಲೆ ಸಾರಿಗೆ ಕರ ಹೇರುವುದು ಬೇಡ ಎಂದು ಕೇಂದ್ರ ಸಚಿವ ಅನಂತ ಕುಮಾರ್ ಬಿಬಿಎಂಪಿಯನ್ನು ಒತ್ತಾಯಿಸಿದ್ದಾರೆ.
ಬೆಂಗಳೂರು ಜನರ ಮೇಲೆ ಮತ್ತೊಂದು ಸೆಸ್ ಹೇರಲು ಬಿಬಿಎಂಪಿ ಸಿದ್ಧತೆ
ಈ ಕುರಿತು ಮಾತನಾಡಿರುವ ಅವರು ಬೆಂಗಳೂರು ಜನತೆ ಈಗಾಗಲೇ ಆಸ್ತಿ ತೆರಿಗೆ ಇನ್ನಿತರೆ ತೆರಿಗೆಯನ್ನು ಪಾವತಿ ಮಾಡುತ್ತಿದೆ ಈಗ ಈ ಸಾರಿಗೆ ಕರವನ್ನೂ ವಿಧಿಸಿದರೆ ಅವರಿಗೆ ಅನನುಕೂಲವಾಗಲಿದೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚು ಪ್ರಮಾಣದಲ್ಲಿ ಆಸ್ತಿ ತೆರಿಗೆ ವಸೂಲು ಮಾಡಲು ಅವಕಾಶ ಇದೆ. ಇದಕ್ಕೆ ಪ್ರಯತ್ನಿಸದೆ ತೆರಿಗೆ ವಿಧಿಸುವ ಆಲೋಚನೆ ಮಾಡಬಾರದು.
ಆಸ್ತಿ ತೆರಿಗೆ ಮೋಸ: ಇಸ್ರೋಗೆ ಮೊರೆ ಹೋದ ಬಿಬಿಎಂಪಿ
ಸೋರಿಕೆ ತಡೆಗಟ್ಟಿ ಆಡಳಿತವನ್ನು ಬಿಗಿ ಮಾಡಿದರೆ ಹೊಸ ತೆರಿಗೆಗಳನ್ನು ವಿಧಿಸುವ ಪ್ರಮೇಯವೇ ಬರುವುದಿಲ್ಲ, ತೆಲಂಗಾಣವು ಕರ್ನಾಟಕ ಭಾಗದ ಶಿವರಾಮಪುರದಲ್ಲಿ ಗಡಿ ಅತಿಕ್ರಮಣ ಮಾಡಿದ್ದರೆ ಅದನ್ನು ಒಪ್ಪಿಕೊಳ್ಳಲಾಗದು. ಆಯಾ ರಾಜ್ಯಗಳಿಗೆ ನಿರ್ದಿಷ್ಟ ಗಡಿ ಇರುತ್ತದೆ. ಒಂದು ವೇಳೆ ತೆಲಂಗಾಣ ಅತಿಕ್ರಮಣ ಮಾಡಿದ್ದಲ್ಲಿ ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ.
ಈ ಕುರಿತು ಕುಮಾರಸ್ವಾಮಿಯವರು ತೆಲಂಗಾಣ ಮುಖ್ಯಮಂತ್ರಿಯವರೆ ಜತೆಗೆ ಕುಳಿತು ಒಂದು ತೀರ್ಮಾನಕ್ಕೆ ಬರುವ ಅಗತ್ಯವಿದೆ ಎಂದರು.