ಸರ್ಕಾರ ಬೀಳದಿದ್ದರೆ ಉಮೇಶ್ ಕತ್ತಿ ರಾಜೀನಾಮೆ ನೀಡಲಿ: ದಿನೇಶ್
ಬೆಂಗಳೂರು, ಡಿಸೆಂಬರ್ 26: ಒಂದೊಮ್ಮೆ ಉಮೇಶ್ ಕತ್ತಿ ಹೇಳಿರುವ ಹಾಗೆ ಒಂದು ದಿನದಲ್ಲಿ ಮೈತ್ರಿ ಸರ್ಕಾರ ಬೀಳದಿದ್ದರೆ ಅವರು ರಾಜೀನಾಮೆ ನೀಡಲಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಉಮೇಶ್ ಕತ್ತಿಯವರು ಇನ್ನು 24 ಗಂಟೆಯೊಳಗಾಗಿ ಸಮ್ಮಿಶ್ರ ಸರ್ಕಾರ ಬೀಳುತ್ತದೆ, ಬಿಜೆಪಿ ಹೊಸ ಸರ್ಕಾರವನ್ನು ಕಟ್ಟುತ್ತದೆ ಎಂಬ ಹೇಳಿಕೆ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ. ಸರ್ಕಾರ ಸುಭದ್ರವಾಗಿದೆ. ಸರ್ಕಾರ ಉರುಳುತ್ತದೆ ಎನ್ನುವುದಕ್ಕೆ ಉಮೇಶ್ ಕತ್ತಿ ಬಳಿ ದಾಖಲೆಯಾದರೂ ಏನಿದೆ ಎಂದು ಪ್ರಶ್ನಿಸಿದರು.
ಮೈತ್ರಿ ಸರ್ಕಾರ ಪತನಕ್ಕೆ ಇನ್ನು 24 ಗಂಟೆಗಳು ಮಾತ್ರ: ಉಮೇಶ್ ಕತ್ತಿ
ಕತ್ತಿ ಅವರ ಮಾತು ನವಾಗದೇ ಇದ್ದರೆ ಅವರಿಗೆ ತಾಕತ್ತಿದ್ದರೆ ಅವರ ಸ್ಥಾನಕ್ಕೆ ರಾಜೀನಾಮೆ ನೀಡಲಿ, ಅದನ್ನು ಬಿಟ್ಟು ಸರ್ಕಾರದ ಕಾಲೆಳೆಯುವ ಕೆಟ್ಟ ಹೆಸರು ತರುವ ಪ್ರಯತ್ನಕ್ಕೆ ಕೈಹಾಕಬಾರದು ಎಂದರು.
ಸಚಿವ ಸಂಪುಟ ವಿಸ್ತರಣೆ ಬಳಿಕ ಖಾತೆ ಹಂಚಿಕೆ ಬಗ್ಗೆ ಮಾತುಕತೆ ನಡೆದಿದೆ. ಖಾತೆ ಬಗ್ಗೆ ಸುಳ್ಳು ಹೇಳುವುದು ತಪ್ಪು, ಸಿದ್ದರಾಮಯ್ಯ, ಪರಮೇಶ್ವರ ನಡುವೆ ಯಾವುದೇ ಮಾತಿನ ಚಕಮಕಿಯೂ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.